ಕರ್ನೂಲ್ ಕೋಟೆಗೆ ಕೊಂಡ ರೆಡ್ಡಿ ಬುರುಜು ಎಂಬ ಹೆಸರೂ ಇದ್ದು ಈ ಕೋಟೆ ಕರ್ನೂಲ್ ನಗರದ ಪ್ರಧಾನ ಹೆಗ್ಗುರುತು. ನಗರದ ಮಧ್ಯಭಾಗದಲ್ಲಿರುವ ಈ ಕೋಟೆಯನ್ನು ಕಟ್ಟಿಸಿದ್ದು ವಿಜಯನಗರ ಸಾಮ್ರಾಜ್ಯದ ದೊರೆ ಅಚ್ಯುತ ದೇವರಾಯ. ಭವ್ಯ ವಾಸ್ತು ಶಿಲ್ಪದ ಭಾಗವಾಗಿ ಉಳಿದಿರುವುದು ಕೊಂಡ ರೆಡ್ಡಿ ಬುರುಜು. ಈ ಕೋಟೆಯ ಬಂಧಿಖಾನೆಯಲ್ಲಿಯೇ ಕೊಂಡ ರೆಡ್ಡಿ ಕೊನೆಯುಸಿರೆಳೆದ ಕಾರಣಕ್ಕೆ ಈ ಗೋಪುರವನ್ನು ಅವನ ಹೆಸರಿಗೆ ಅರ್ಪಿಸಲಾಗಿದೆ. ಕೋಟೆಯ ಹಲವು ಭಾಗ ನಾಶಹೊಂದಿದ್ದು, ಕೆಲವು ಧ್ವಂಸಗೊಂಡ ಭಾಗಗಳು ಇನ್ನೂ ಗಟ್ಟಿಯಾಗಿ ನಿಂತಿವೆ. ಅದರಲ್ಲೊಂದು ಎರ್ರ ಬುರುಜು.
ಈ ಬುರುಜಿನ ಕೆಳಗೆ ಎರಡು ಪ್ರಾಚೀನ ದೇವಸ್ಥಾನಗಳಿವೆ. ಎಲ್ಲಮ್ಮ ದೇವತೆಗೆ ಈ ದೇವಸ್ಥಾನಗಳು ಅರ್ಪಿತವಾಗಿವೆ. ಈ ಬುರುಜಿನ ಅಡಿಯಲ್ಲಿ ಗುಪ್ತನಿಧಿಯಿದೆ ಎಂಬ ನಂಬಿಕೆಯಿದೆ. ಈ ಸಂಪತ್ತನ್ನು ತೆಗೆಯಲು ಹಲವಾರು ವ್ಯರ್ಥ ಪ್ರಯತ್ನಗಳಾಗಿವೆ. ಈ ಕೋಟೆಯಲ್ಲಿ ಹಲವಾರು ಶಿಲಾಶಾಸನಗಳು ಮೂಲ ರಚನೆಗಳೂ ದೊರಕಿವೆ.