ಕೋಲಪುರ ’ಆದಿ ಮಹಾಲಕ್ಷ್ಮಿ’ ಎಂದು ಸಹಾ ಪ್ರಸಿದ್ಧವಾಗಿರುವ ಮೂಕಾಂಬಿಕಾ ದೇವಾಲಯವು ಕೊಲ್ಲೂರಿನ ನೋಡಲೇಬೇಕಾದ ದೇವಾಲಯವಾಗಿದೆ. ಈ ದೇವಾಲಯವು ದಟ್ಟ ಕಾಡು ಮತ್ತು ಸುಂದರ ಪರ್ವತ ಶ್ರೇಣಿಗಳ ನಡುವೆ ಮನೆಮಾಡಿಕೊಂಡಿದೆ. ಇದರ ರಚನೆಯು ಪ್ರಾಚೀನ ಹಿಂದು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಹಾಗು ಇದು...
ಕೊಲ್ಲೂರಿಗೆ ಹೋಗುವ ಪ್ರವಾಸಿಗರು ನೋಡಬಹುದಾದ ಸ್ಥಳಗಳಲ್ಲಿ ಅರಿಷಿಣ ಗುಂಡಿ ಜಲಪಾತವು ಒಂದಾಗಿದೆ. ಈ ಜಲಪಾತವು ಮೂಕಾಂಬಿಕಾ ವನ್ಯಜೀವಿಧಾಮದ ಒಳಗಡೆ ನೆಲೆಸಿದ್ದು, ಕಾಲ್ನಡಿಗೆಯ ಮೂಲಕ ತಲುಪಬಹುದು. ಪ್ರವಾಸಿಗರು ಜಲಪಾತವನ್ನು ವೀಕ್ಷಿಸಲು ಇಲ್ಲಿನ ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಾದುದು ಅಗತ್ಯ. ಈ...
ಮಸ್ತಿಕಟ್ಟೆಯು ಕಾಡಿನ ದೇವತೆಗಳಿಗೆ ಸಮರ್ಪಿಸಲಾದ ದೇವಾಲಯವಾಗಿದ್ದು, ಪ್ರವಾಸಿಗರು ಸಮಯಾವಕಾಶ ದೊರೆತರೆ ಇಲ್ಲಿಗೆ ಭೇಟಿಕೊಡಬಹುದು. ಇಲ್ಲಿನ ದೇವರುಗಳಿಗೆ ಯಾವುದೇ ಛಾವಣಿ ಮತ್ತು ಗುಡಿಯಿಲ್ಲ. ಅದರು ಇಲ್ಲಿನ ಸ್ಥಳೀಯ ಅರ್ಚಕರಿಂದ ಇಲ್ಲಿನ ದೇವರುಗಳಿಗೆ ನಿತ್ಯ ಪೂಜೆ ನೆರವೇರಲ್ಪಡುತ್ತದೆ.ಇಲ್ಲಿನ ನಂಬಿಕೆಯ ಪ್ರಕಾರ ಇಲ್ಲಿನ...
ಕೊಲ್ಲೂರಿನ ಗರುಡ ಗುಹೆಯು ನೋಡಲೇಬೇಕಾದ ಒಂದು ಸ್ಥಳವಾಗಿದೆ. ಇದು ಇಲ್ಲಿನ ಪರಶುರಾಮ ದೇವಾಲಯ ಮತ್ತು ಇಸ್ಕಾನ್ ಸ್ಥಳಕ್ಕೆ ಸಮೀಪದಲ್ಲಿದೆ. ಇದೊಂದು ಪ್ರಾಚೀನ ಗುಹೆಯಾಗಿದ್ದು ಗರುಡನನ್ನು ಪೂಜಿಸಲಾಗುವ ಪವಿತ್ರ ದೇವಾಲಯವಾಗಿದೆ. ಇತಿಹಾಸಕಾರರ ಪ್ರಕಾರ ಗರುಡನು ಇಲ್ಲಿ ತಪಸ್ಸನ್ನು ಆಚರಿಸಿದನಂತೆ. ಪ್ರವಾಸಿಗರು ಇಲ್ಲಿಯೇ...
ಬೆಳಕಲ್ಲು ತೀರ್ಥವು ಕೊಲ್ಲೂರಿಗೆ ಭೇಟಿಕೊಡುವ ಪ್ರವಾಸಿಗರು ಭೇಟಿಕೊಡುವ ಕಣ್ಣು ಕೋರೈಸುವ ಜಲಪಾತವಾಗಿದೆ. ಈ ಜಲಪಾತವು ಸಾಹಸ ಪ್ರಿಯರಿಗೆ ಅದರಲ್ಲು ವಿಶೇಷವಾಗಿ ಚಾರಣ ಮಾಡುವವರು ನೋಡಲೇಬೇಕಾದ ಸ್ಥಳವಾಗಿದೆ.
ಮರಣಕಟ್ಟೆಯು ಕುಂದಾಪುರದಿಂದ ಕೊಲ್ಲೂರಿಗೆ ಹೋಗುವ ಹಾದಿಯಲ್ಲಿ 16 ಕಿ.ಮೀ ದೂರದಲ್ಲಿರುವ ಸ್ಥಳವಾಗಿದೆ. ಇದು ಇಲ್ಲಿನ ದೇವಾಲಯಗಳಿಂದಾಗಿ ಪ್ರಸಿದ್ಧವಾಗಿದ್ದು ಪ್ರವಾಸಿಗರು ಒಮ್ಮೆ ಇಲ್ಲಿಗೆ ಭೇಟಿಕೊಡಬಹುದು. ಇಲ್ಲೊಂದು ಪುರಾತನ ಬ್ರಹ್ಮಲಿಂಗೇಶ್ವರ ದೇವಸ್ಥಾನವಿದ್ದು, ಮೂಕಾಂಬಿಕೆಯು ಮೂಕಾಸುರನನ್ನು ಇದೇ ಸ್ಥಳದಲ್ಲಿ ಸಂಹರಿಸಿ...
ಶರಾವತಿ ವನ್ಯಜೀವಿಧಾಮಕ್ಕೆ ಹೊಂದಿಕೊಂಡಿರುವ ಮೂಕಾಂಬಿಕಾ ವನ್ಯಜೀವಿಧಾಮವು ಕೊಲ್ಲೂರಿನ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದ್ದು, ಪ್ರವಾಸಿಗರು ಇಲ್ಲಿಗೆ ಭೇಟಿಕೊಡಬಹುದು ಎಂದು ಸಲಹೆ ಕೊಡಬಹುದು. ಇದು 247 ಚ ,ಕಿ,ಮೀ ನಷ್ಟು ವ್ಯಾಪಿಸಿದೆ. ಈ ವನ್ಯಜೀವಿಧಾಮವು ಪಶ್ಚಿಮ ಘಟ್ಟದ ನಿತ್ಯ ಹರಿದ್ವರ್ಣ, ಅರೆ...