ಪ್ರವಾಸಿಗರು ಕೋಲಾರ ಜಿಲ್ಲೆಯಲ್ಲಿ ಯೆಲ್ಲೊಡು ಬೆಟ್ಟದ ಮೇಲಿನ ಶ್ರೀ ಆದಿನಾರಾಯಣಸ್ವಾಮಿ ದೇವಾಲಯಕ್ಕೆ ಒಮ್ಮೆ ಭೇಟಿಕೊಡಬಹುದು. ಇದೊಂದು ಗುಹಾಂತರ ದೇವಾಲಯವಾಗಿದ್ದು ಬಾಗೇಪಲ್ಲಿಯಿಂದ 12 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಯಾತ್ರಾ ಸ್ಥಳವು ಒಡವೆ ಆಭರಣಗಳು ರಹಿತವಾದ ಒಂದು ಉದ್ಭವ ಮೂರ್ತಿಯನ್ನು ಹೊಂದಿದೆ. ಇಲ್ಲಿ ಪ್ರತಿ ಭಾನುವಾರ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ.ಭಕ್ತಾಧಿಗಳು ಆದಿನಾರಾಯಣಸ್ವಾಮಿ ದೇವಾಲಯವು ದೇಶೀಯತೆಗೆ ಹೊಂದಿಕೊಂಡಿರುವುದನ್ನು ಇಲ್ಲಿನ ರಥೋತ್ಸದ ಸಮಯದಲ್ಲಿ ಕಾಣಬಹುದು. ಈ ರಥೋತ್ಸವವು ಮಾಘಮಾಸ ಅಂದರೆ ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಜರುಗುತ್ತದೆ. ಯಾತ್ರಾರ್ಥಿಗಳು ಈ ದೇವಾಲಯವನ್ನು ತಲುಪಲು 618 ಮೆಟ್ಟಿಲುಗಳನ್ನು ಹತ್ತಬೇಕು. 618 ಮೆಟ್ಟಿಲುಗಳಲ್ಲಿ ದೇವಾಲಯಕ್ಕೆ ಅತಿ ಸನಿಹದ ಎರಡು ಮೆಟ್ಟಿಲುಗಳು ಅಸಾಧಾರಣವಾಗಿ ಎತ್ತರವಾಗಿದ್ದು ಹಗ್ಗದ ಸಹಾಯದಿಂದ ಹತ್ತಿ ಮೇಲೆ ಹೋಗಬಹುದು.