ಉದೈಪುರ ಹಿಮಾಚಲ ಪ್ರದೇಶದ ಕೀಲಾಂಗ್ ನಿಂದ 53 ಕಿ. ಮೀ ದೂರದಲ್ಲಿರುವ ವಿಲಕ್ಷಣ ಪ್ರವಾಸಿ ತಾಣವಾಗಿದೆ. ಇದು ಸಮುದ್ರ ಮಟ್ಟದಿಂದ 2523 ಮೀಟರ್ ಎತ್ತರದ ಸ್ಥಾನದಲ್ಲಿರುವ ಉದೈಪುರ ಮಾಯರ್ ನುಲ್ಲಾಹ್ ತೊರೆ ಬಳಿಯಿದೆ. ಹಿಂದೆ ಈ ಸ್ಥಳವನ್ನು ಮರ್ಕುಲ್ ಅಥವಾ ಮರ್ಗುಲ್ ಎಂದು ಕರೆಯಲಾಗುತ್ತಿತ್ತು. ನಂತರದ 1695 ರಲ್ಲಿ ಚಂಬಾ ರಾಜಾ ಉದಯ್ ಸಿಂಗ್ ನಿಂದ ಉದೈಪುರ ಎಂದು ಮರುನಾಮಕರಣ ಮಾಡಲಾಯಿತು.
ಹಳ್ಳಿಯು ಸಂಪೂರ್ಣವಾಗಿ ಕೈಲ್ (ನೀಲಿ ಪೈನ್) ಕಾಡುಗಳಿಂದ ಸುತ್ತುವರೆದಿದೆ. ಕಡಿಮೆ ಎತ್ತರದ ಭಾಗದಲ್ಲಿರುವ ವಾಲ್ನಟ್ಸ್, ಏಪ್ರಿಕಾಟ್ ಮೊದಲಾದ ಒಣ ಹಣ್ಣುಗಳು ಮತ್ತು ಸೇಬು ಮುಂತಾದ ಮತ್ತು ಹಣ್ಣುಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ಹರ್ಮನ್ ಗೋಟ್ಜ್, ಎಂಬ ಹೆಸರಾಂತ ಜರ್ಮನ್ ಸಂಯೋಜಕ 1939 ರಲ್ಲಿ ಈ ಗ್ರಾಮಕ್ಕೆ ಭೇಟಿ ನೀಡಿದ್ದ. ಆತ ಈ ಗ್ರಾಮದ ನೈಸರ್ಗಿಕ ಸೌಂದರ್ಯವನ್ನು ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಸ್ವಿಸ್ ಪರ್ವತದ ದೃಶ್ಯಾವಳಿಗಳಿಗೆ ಗ್ರಾಮವನ್ನು ಹೋಲಿಸಿದ್ದನು!
ಈ ಸ್ಥಳವು ತ್ರಿಲೋಕಿನಾಥ್ ದೇವಾಲಯ ಮತ್ತು ಮರ್ಕುಲಾ ದೇವಿ ದೇವಸ್ಥಾನದಿಂದಾಗಿ ಪ್ರಸಿದ್ಧವಾಗಿದೆ. ಈ ಎರಡು ಧಾರ್ಮಿಕ ಸ್ಥಳಗಳು ದೇಶದ ಎಲ್ಲ ಪ್ರದೇಶಗಳಿಂದ ಸಾವಿರಾರು ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತವೆ.