ಆದಿ ಶಂಕರ ಕೀರ್ತಿಸ್ತಂಭಂ ಮಂಡಪಂ ಅನ್ನು ಕಂಚಿ ಕಾಮಕೋಟಿ ಮಠದವರು ನಿರ್ಮಿಸಿದ್ದಾರೆ. ಇದೊಂದು ಎಂಟು ಅಂತಸ್ತಿನ ಕಟ್ಟಡವಾಗಿದ್ದು, ಪಾದುಕ ಮಂಟಪದ ಕಡೆಗೆ ಸಾಗುತ್ತದೆ. ಇಲ್ಲಿ ಎರಡು ಬೆಳ್ಳಿಯ ಗುಂಡುಗಳಿದ್ದು, ಅವು ಗುರುವಿನ ಎರಡು ಪಾದುಕೆಗಳನ್ನು ಪ್ರತಿನಿಧಿಸುತ್ತದೆ. ಪಾದುಕೆ ಎಂದರೆ ಗುರುವಿಗಾಗಿ ಗಂಧದ ಮರದಲ್ಲಿ ನಿರ್ಮಿಸಲ್ಪಟ್ಟ ಪಾದರಕ್ಷೆ ಎಂದರ್ಥ. ಇಲ್ಲಿರುವ ಸ್ಮಾರಕ ಭವನದಲ್ಲಿ ಆದಿ ಶಂಕರಾಚಾರ್ಯರ ಜೀವನದ ಹಲವು ಸನ್ನಿವೇಶಗಳನ್ನು ವರ್ಣಚಿತ್ರಗಳ ಮೂಲಕ ಪ್ರದರ್ಶಿಸಲಾಗುತ್ತಿದೆ. ಈ ವರ್ಣಚಿತ್ರಗಳನ್ನು ತಪ್ಪದೆ ನೋಡಬೇಕು. ಈ ದೇವಾಲಯಕ್ಕೆ ಎಲ್ಲ ಧರ್ಮದವರಿಗು ಪ್ರವೇಶಾವಕಾಶವಿದೆ. ಇಲ್ಲಿನ ಆದಿಶಂಕರಾಚಾರ್ಯರ ಸ್ತೂಪಕ್ಕೆ ಎಂಟು ಪಾರ್ಶ್ವಗಳಿವೆ. ನೀವೇನಾದರು ಕಾಲಡಿಗೆ ಭೇಟಿಕೊಟ್ಟದ್ದಾದಲ್ಲಿ ಇಲ್ಲಿಗೆ ಬಂದು ಈ ಶ್ರೇಷ್ಠ ಗುರುವಿಗೆ ನಿಮ್ಮ ನಮನಗಳನ್ನು ಸಲ್ಲಿಸಿ.


Click it and Unblock the Notifications