ವರಾಹ ಎನ್ನುವುದು ಸಂಸ್ಕೃತ ಪದ. ಇದರ ಅರ್ಥ ಗಂಡು ಹಂದಿ. ಪುರಾಣಗಳ ಪ್ರಕಾರ, ಭಕ್ತರ ಸಂಕಟಗಳನ್ನು ನಿವಾರಿಸಲು ವಿಷ್ಣು ತಳೆದ ಹತ್ತು ಅವತಾರಗಳಲ್ಲಿ ಇದು ಒಂದಾಗಿದೆ. ಮಾನವನ ರೂಪದಲ್ಲಿದ್ದ ಹಿರಣ್ಯಕಶ್ಯಪು ಭೂದೇವಿಯಿಂದ ಭೂಮಿಯನ್ನು ವಶಪಡಿಸಿ ಸಾಗರದಲ್ಲಿ ಹುದುಗಿಸುತ್ತಾನೆ. ಇದೆಲ್ಲವನ್ನು ನೋಡಿದ ವಿಷ್ಣು ಹಂದಿಯ ರೂಪದಲ್ಲಿ ಬಂದು ಸಮದ್ರದಿಂದ ಭೂಮಿಯನ್ನು ಹೊರತರುತ್ತಾನೆ. ವರಾಹನ ಮೂರ್ತಿಯು ಹಂದಿಯ ತಲೆ ಮತ್ತು ಮನುಷ್ಯನ ದೇಹವನ್ನು ಹೊಂದಿದೆ.
ಜಿಂದ್ ನ ಮುಖ್ಯ ನಗರದಿಂದ ಹತ್ತು ಕಿ.ಮೀ. ದೂರದಲ್ಲಿರುವ ಬರಾಹ ಗ್ರಾಮದಲ್ಲಿ ವಿಷ್ಣು ದೇವರಿಗೆ ಸಮರ್ಪಿಸಲಾಗಿರುವ ವರಾಹ ತೀರ್ಥವಿದೆ. ಹಂದಿಯ ರೂಪದಲ್ಲಿ ವಿಷ್ಣು ಈ ಸ್ಥಳದಲ್ಲಿ ನೆಲೆಯಾಗಿದ್ದನೆಂದು ನಂಬಲಾಗಿದೆ.
ಪವಿತ್ರ ಕೊಳದಲ್ಲಿ ಸ್ನಾನ ಮಾಡುವುದರಿಂದ ವಿಷ್ಣುವಿನ ಕೃಪೆ ಸಿಗುತ್ತದೆ. ಅಗ್ನಿ ಸ್ತೋಮಾಕ್ಕೆ ಸಮಾನಾದ ಧಾರ್ಮಿಕ ಶ್ರೇಷ್ಠತೆಯನ್ನು ಇಲ್ಲಿ ನೆಲೆಸಿದವರು ಪಡೆಯಬಹುದು. ಅಗ್ನಿ ಸ್ತೋಮವು ಅಗ್ನಿ ದೇವರಿಗೆ ಮಾಡುವ ಪ್ರಾರ್ಥನೆ ಮತ್ತು ಅಗ್ನಿ ದೇವರನ್ನು ಒಲೈಸಲು ಪ್ರಾಣಿಯನ್ನು ಬಲಿಕೊಡಬೇಕು.