ಶ್ರೀ ತೀರ್ಥ ಅಥವಾ ಅಮೂಲ್ಯ ಕಪ್ಪು ಕಲ್ಲಿನ ಸಾಲಿಗ್ರಾಮವಿರುವ ಮಂದಿರ. ಮೂಲ ಸಾಲಿಗ್ರಾಮ ಕಲ್ಲುಗಳು ನೇಪಾಳದ ಗಂಡಕಿ ನದಿ ಮತ್ತು ಹಿಮಾಲಯದ ಬೆಟ್ಟಗಳ ಹತ್ತಿರ ಸಿಗುತ್ತದೆ. ಅವುಗಳು ಗೋಲಾಕರ ಅಥವಾ ತಟ್ಟೆಯ ಆಕಾರದಲ್ಲಿರುತ್ತದೆ.
ಸಾಲಿಗ್ರಾಮ ಕಲ್ಲುಗಳನ್ನು ತುಂಬಾ ಪವಿತ್ರವೆಂದು ಪರಿಗಣಿಸಲಾಗಿದ್ದು, ಇದರಿಂದಾಗಿ ಇವುಗಳಿಂದ ಮೂರ್ತಿಗಳನ್ನು ಕೆತ್ತಲಾಗುತ್ತದೆ. ಈ ಕಲ್ಲುಗಳು ಕೃಷ್ಣ ಅಥವಾ ವಿಷ್ಣು ದೇವರು ಉಪಯೋಗಿಸಿದಂತಹ ಸುದರ್ಶನ ಚಕ್ರ ಆಕಾರದಲ್ಲಿರುತ್ತದೆ.
ಇದರಿಂದಾಗಿ ಸಾಲಿಗ್ರಾಮ ಕಲ್ಲಿನಲ್ಲಿ ವಿಷ್ಣುವಿನ ರೂಪವಿದೆಯೆನ್ನಲಾಗುತ್ತದೆ. ಸಾಲಿಗ್ರಾಮವನ್ನು ಪೂಜಿಸುವುದರಿಂದ ವಿಷ್ಣು ಒಲಿದು ಭಕ್ತರಿಗೆ ಆರೋಗ್ಯ, ಸಂಪತ್ತು, ವಿವೇಕ ಮತ್ತು ಸಂತಸ ನೀಡುತ್ತಾನೆಂದು ನಂಬಲಾಗಿದೆ. ಬಟ್ಟಲಿನಲ್ಲಿ ಕಲ್ಲನ್ನಿಟ್ಟು ಅದಕ್ಕೆ ನೀರನ್ನು ಹಾಕಿ ತೀರ್ಥವಾಗಿ ಸ್ವೀಕರಿಸುವ ಪೂಜಾಕ್ರಮವಿದೆ. ನೀರು ಪವಿತ್ರ ಅಮೃತವಾಗಿ ರೂಪಾಂತರಗೊಂಡು ದೈವಿಕ ಗುಣಗಳನ್ನು ಹೊಂದುತ್ತದೆ ಎನ್ನುವ ನಂಬಿಕೆಯಿದೆ.
ಜಿಂದ್ ಜಿಲ್ಲೆಯ ನರ್ವಾನ ತೆಹ್ಸಿಲ್ ನ ಸಿಮ್ಲಾ ಗ್ರಾಮದಲ್ಲಿ ಶ್ರೀ ತೀರ್ಥವಿದೆ. ಇದು ಪ್ರಾರ್ಥನೆಗೆ ಅತ್ಯಂತ ಜೇಷ್ಠ್ಯ ಸ್ಥಳವೆಂದು ಪರಿಗಣಿಸಲಾಗಿದೆ. ಇದರ ಬಳಿಯಲ್ಲೇ ಇರುವ ಕೊಳದಲ್ಲಿ ಸ್ನಾನ ಮಾಡುವುದರಿಂದ ಭಕ್ತರಿಗೆ ಮನಸ್ಸಿಗೆ ಶಾಂತಿ ಮತ್ತು ಸುಖವನ್ನು ನಿಡುತ್ತದೆ.