ಶೀರ್ಪಿಕೆಯಲ್ಲಿರುವ ಹಂಸ ಎನ್ನುವ ಪದವು ವಲಸೆ ಹಕ್ಕಿ ಹಂಸ ಅಥವಾ ಹೆಬ್ಬಾತುವಿನಿಂದ ಬಂದಿದೆ. ಹಿಂದೂ-ಬುದ್ಧರ ನಂಬಿಕೆಯ ಪ್ರಕಾರ ಹಂಸವು ದೇವಿ ಸರಸ್ವತಿಯ ವಾಹನವಾಗಿದೆ. ಹಂಸವು ಭಾರೀ ಎತ್ತರಿಂದ ಯಾವುದೇ ಅಡೆತಡೆಯಿಲ್ಲದೆ ಸುಮಾರು 7 ಸಾವಿರ ಮೈಲಿ ದೂರ ಹಾರುವ ಸಾಮರ್ಥ್ಯ ಹೊಂದಿರುವ ಕಾರಣ ಸರಸ್ವತಿ ದೇವಿ ಈ ಪಕ್ಷಿಯನ್ನು ತನ್ನ ವಾಹನವಾಗಿ ಆಯ್ಕೆ ಮಾಡಿಕೊಂಡರು.
ಉದ್ದದ ಕತ್ತನ್ನು ಹೊಂದಿರುವ ಹಂಸವು ಟಿಬೆಟ್ ನ ಮಾನಸಸರೋವರದಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ ಮತ್ತು ಚಳಿಗಾಲದಲ್ಲಿ ಸಂತಾನವೃದ್ಧಿಗಾಗಿ ಇವು ಭಾರತದ ವಿವಿಧ ಭಾಗಗಳಿಗೆ ವಲಸೆ ಬರುತ್ತದೆ. ಹಂಸವು ಕೇವಲ ಮುತ್ತುಗಳನ್ನು ಮಾತ್ರ ತಿನ್ನುತ್ತದೆ ಮತ್ತು ಹಾಲು ಮತ್ತು ನೀರನ್ನು ಬೆರೆಸಿದಾಗ ಅದು ಹಾಲನ್ನು ಮಾತ್ರ ಕುಡಿಯುತ್ತದೆ ಎಂದು ಉಪನಿಷತ್ತುಗಳಲ್ಲಿದೆ. ಇದೆಲ್ಲವೂ ಬ್ರಹ್ಮನ ಜ್ಞಾನಕ್ಕೆ ಮೀರಿದ್ದಾಗಿದೆ.
ಪವಿತ್ರ ಸ್ಥಳವಾಗಿರುವ ಜಿಂದ್ ಪುರಾಣದಲ್ಲಿ ಆಳವಾದ ಬೇರನ್ನು ಹೊಂದಿದೆ. ಜಿಂದ್ ನಿಂದ ಐದು ಕಿ.ಮೀ. ದೂರದಲ್ಲಿರುವ ಐಕ್ಕಾಸ್ ಗ್ರಾಮದಲ್ಲಿ ಏಕಹಂಸ ಮಂದಿರವಿದೆ. ಜಿಂದ್-ಹನ್ಸಿ ರಸ್ತೆ ಮೂಲಕ ಇಲ್ಲಿಗೆ ಪ್ರಯಾಣಿಸಬಹುದು.
ಕೃಷ್ಣ ದೇವರ ಸಂಬಂಧವಿರುವ ಮಂದಿರದ ಬಗ್ಗೆ ಪುರಾಣಗಳಲ್ಲಿಯೂ ಉಲ್ಲೇಖವಿದೆ. ದೇವರು ಎಲ್ಲರಿಗೂ ಆಶೀರ್ವಾದವನ್ನು ನೀಡುವ ವರ್ಣಚಿತ್ರವೊಂದು ಮಂದಿರದಲ್ಲಿದೆ.