ಹರಿದ್ವಾರದಲ್ಲಿನ ನೀಲ ಪರ್ವತದ ಮೇಲೆ ನೆಲೆಗೊಂಡಿದೆ ಈ ಚಂಡಿ ದೇವಿ ದೇವಸ್ಥಾನ. ದೇಶದ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಈ ದೇವಾಲಯವು 52 ಶಕ್ತಿ ಪೀಠಗಳಲ್ಲಿ ಒಂದು ಮತ್ತು ಇದನ್ನು1929 ರಲ್ಲಿ ಕಾಶ್ಮೀರದ ಮುಂಚಿನ ರಾಜ ನಿರ್ಮಿಸಿದನು. ಆದಾಗ್ಯೂ, ಈ ದೇವಾಲಯದ ಪ್ರಸ್ತುತ ದೇವತೆಯ ವಿಗ್ರಹವು 8 ನೆಯ ಶತಮಾನದಲ್ಲಿ ಮಹಾನ್ ಋಷಿ, ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟಿತು ಎಂದು ಹೇಳಲಾಗುತ್ತದೆ.
ಒಂದು ಜಾನಪದ ಕಥೆಯ ಪ್ರಕಾರ, ನೀಲ ಪರ್ವತವು, ಹಿಂದೂ ದೇವತೆ ಚಂಡಿಕಾ ದೇವಿ, ರಾಕ್ಷಸ ರಾಜರಾದ ಶುಂಭ ಹಾಗೂ ನಿಶುಂಭರನ್ನು ಕೊಂದ ನಂತರ ಕೆಲ ಕಾಲ ವಿಶ್ರಾಂತಿ ತೆಗೆದುಕೊಂಡ ಸ್ಥಳವಾಗಿದೆ ಎನ್ನಲಾಗುತ್ತದೆ. ಈ ದೇವಸ್ಥಾನವನ್ನು ತಲುಪಲು, ಪ್ರಯಾಣಿಕರು ಹರಿದ್ವಾರ ನಗರದ ಯಾವುದೇ ಭಾಗದಿಂದ ರಿಕ್ಷಾ, ಟ್ಯಾಕ್ಸಿ ಮತ್ತು ಟಾಂಗಾ ವಾಹನಗಳ ಮೂಲಕ ತಲುಪಬಹುದು. ಅಲ್ಲದೆ, ಚಂಡಿಘಾಟ್ ನಿಂದ 3 ಕಿ. ಮೀ ದೂರವಿರುವ ಟ್ರೆಕ್ಕಿಂಗ್ - ಮಾರ್ಗದ ಮೂಲಕವೂ ಈ ಸ್ಥಳಕ್ಕೆ ತಲುಪಬಹುದು. ಇನ್ನೊಂದು ಆಸಕ್ತಿದಾಯಕ ಆಯ್ಕೆಯಾದ ಕೇಬಲ್ ಕಾರಿನ ಮೂಲಕವು ಪ್ರಯಾಣಿಸಬಹುದಾಗಿದ್ದು, ಇದು ದೇವಾಲಯವನ್ನು ತಲುಪಲು 25 ನಿಮಿಷಗಳ ಅವಧಿಯನ್ನು ತೆಗೆದುಕೊಳ್ಳುತ್ತದೆ.