ರಾಜರ ತುಲಾಭಾರ ಅಥವಾ ತುಲ ಪುರುಷಾದನ ಎಂದೇ ಪ್ರಸಿದ್ಧಿಯಾದ ಇದು ವಿಜಯವಿಟ್ಠಲ ದೇವಾಲಯದ ನೈರುತ್ಯ ಭಾಗದಲ್ಲಿದೆ. ಆಗಿನ ಸ್ಥಳೀಯ ಆಡಳಿತಗಾರರು ತಮ್ಮನ್ನು ತಾವೇ,ಧಾನ್ಯ,ಬಂಗಾರ,ಬೆಳ್ಳಿ,ಮುತ್ತುರತ್ನಗಳಿಂದ ತೂಗಿಸಿಕೋಳ್ಳುತ್ತಿದ್ದರಿಂದ ಈ ಹೆಸರು ಬಂದಿದೆ. ಈ ಬಗೆಯ ಆಚರಣೆಯು ವಿಶೇಷವಾಗಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳಲ್ಲಿ ಜರುಗುತ್ತಿದ್ದು,ತೂಗಿಸಿಕೊಂಡಂಥ ರಾಜನ ತೂಕಕ್ಕೆ ಸಮನಾದ ವಸ್ತುಗಳನ್ನು ಅರ್ಚಕರು ಅಥವಾ ಪುರೋಹಿತರಿಗೆ ದಾನದಲ್ಲಿ ನೀಡಲಾಗುತ್ತಿತ್ತು. ಈ ರೀತಿಯಾದ ವಿಸ್ಮಯದ ಇತಿಹಾಸವನ್ನು ಹೊಂದಿರುವಂತಹ ಈ ತಾಣವು ಕೂಡ ಜನಪ್ರೀಯವಾಗಿದೆ. ಇಲ್ಲಿ ಎರಡು 15ಅಡಿ ಎತ್ತರದ ಗ್ರಾನೈಟ್ ಕಲ್ಲಿನ ಖಂಬಗಳಿದ್ದು,ಅದರ ಮೇಲೆ 12ಅಡಿ ಉದ್ದದ ಕಲ್ಲಿನ ಖಂಬವನ್ನು ಇಡಲಾಗಿದೆ. ಇದರ ಕೆಳಭಾಗದಲ್ಲಿ 3 ಸುರುಳಿಗಳನ್ನು ಕಾಣಬಹುದು. ಈ ಎರಡು ಖಂಬಗಳ ಪೈಕಿ ಒಂದರಲ್ಲಿ, ರಾಜನ ಹಾಗು ಅವನ ಇಬ್ಬರು ರಾಣಿಯರ ಉಬ್ಬು ಚಿತ್ರಗಳನ್ನು ರಚಿಸಲಾಗಿದ್ದು, ಅವುಗಳು ಕೄಷ್ಣ್ದೇವರಾಯ ಹಾಗು ಅವನ ಇಬ್ಬರು ಹೆಂಡತಿಯರ ಚಿತ್ರಗಳೆಂದು ವಿಶ್ಲೇಷಿಸಲಾಗಿದೆ. ಇದು ಕಂಪ ಭೂಪನ ಮಾರ್ಗದ ಅಂತ್ಯದಲ್ಲಿದ್ದು ವಿಜಯವಿಟ್ಠಲ ದೇವಾಲಯದ ಹತ್ತಿರದಲ್ಲಿದೆ.