ಶ್ರೇಯಸ್ಕರ, ಸಿದ್ಧ ವಿನಾಯಕ/ಸಿದ್ಧಿ ವಿನಾಯಕ ದೇವಾಲಯವನ್ನು ಹೊಂದಿರುವ ಪಂಚಮಾ, ಓರಿಸ್ಸಾದ ಇಡೀ ಗಂಜಾಂ ಜಿಲ್ಲೆಯಲ್ಲಿಯೇ ಒಂದು ಅತ್ಯಂತ ಪ್ರಸಿದ್ಧ ಗ್ರಾಮ. ಈ ಸ್ಥಳ ಭಗವಾನ್ ಗಣೇಶ್ ಜಿಯ ಪ್ರಮುಖ ಆರಾಧನಾ ಕೇಂದ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಇದು ಪಂಚದೇವತೆಗಳನ್ನೂ ಸಹ ಪೂಜಿಸಲಾಗುವ ರಾಜ್ಯದ ಅತ್ಯಂತ ಪವಿತ್ರ ಆರಾಧನಾ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿನ ದೇವತೆಯನ್ನು ಅತ್ಯಂತ ಶಕ್ತಿಯುತ ಎಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ಗಣೇಶ ಚತುರ್ಥಿ ದಿನದಂದು ದೇವಸ್ಥಾನದ ಆವರಣದಲ್ಲಿ ದೊಡ್ಡ ಉತ್ಸವವು ನಡೆಯುತ್ತದೆ.
ರಾಜ್ಯಾದ್ಯಂತದಿಂದ ಸಾವಿರಾರು ಭಕ್ತರು, ದೇವರ ಆಶೀರ್ವಾದವನ್ನು ಪಡೆಯಲು ಈ ದಿನ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಪಂಚಮ ಹಳ್ಳಿಯಿಂದ ಕೇವಲ ಹನ್ನೆರಡು ಕಿಲೋಮೀಟರ್ ದೂರದಲ್ಲಿರುವ ಬೇರ್ಹಂಪುರ್ ರೈಲ್ವೆ ನಿಲ್ದಾಣದಿಂದ ಪ್ರಯಾಣಿಕರು ಈ ಪ್ರವಾಸಿ ಸ್ಥಳಕ್ಕೆ ತಲುಪಬಹುದು.


Click it and Unblock the Notifications