ನಿರ್ಮಲಝರ ಗಂಜಾಂ ನಿಂದ 37 ಕೀಲೊ ಮೀಟರ ದೂರದಲ್ಲಿದೆ. ಈ ಸ್ಥಳವು ದೇವಾಲಯ ಸಂಕೀರ್ಣಕ್ಕೆ ಹೆಸರುವಾಸಿಯಾಗಿದ್ದು, ಈ ಸಂಕೀರ್ಣದಲ್ಲಿ ವಿಷ್ಣು, ಜಗನ್ನಾಥ, ವಿಮಲ, ರಾಧಾ ಕೃಷ್ಣ, ಶಿವ, ಗಣೇಶ ಮತ್ತು ಸೂರ್ಯ ದೇವರ ದೇವಾಲಯಗಳೀವೆ. ಬದಘಾಟಿ ಪರ್ವತದಿಂದ ನಿರಂತರವಾಗಿ ಹರಿಯುವ ತೊರೆಯೊಂದು ಕೆಳಗೆ ಹರಿದು ಬರುತ್ತದೆ. ಇದು ಕೆಲ ಸ್ಥಳಗಳಲ್ಲಿ ಸಂಗ್ರಹಗೊಂಡು ಶುದ್ದ ಸ್ಫಟಿಕದ ನೀರಿನ ಕೊಳವನ್ನು ರೂಪಿಸುತ್ತದೆ. ಆದ್ದರಿಂದ ಈ ಸ್ಥಳಕ್ಕೆ ನಿರ್ಮಲಝರ ಎಂದು ಕರೆಯಲಾಗುತ್ತದೆ. ನಿರ್ಮಲಝರ ಎಂದರೆ ಶುದ್ದ ನೀರು ಎಂದರ್ಥ. ವಿಮಲ ದೇವತೆಯು ನಿರ್ಮಲಝರದ ಪ್ರಮುಖ ದೇವತೆಯಾಗಿದ್ದಾಳೆ.
ಇಲ್ಲಿಯ ವಿಷ್ಣು ದೇವಸ್ಥಾನದ ಗೋಡೆಯ ಮೇಲೆ ಕೆತ್ತಲಾದ ಉನ್ನತ ಮಟ್ಟದ ಕಾರ್ಯ ನೈಪುಣ್ಯತೆ ಮತ್ತು ಈ ದೇವಾಲಯದಲ್ಲಿರುವ ಮಹಾಭಾರತದ ಕಥೆಗಳನ್ನು ಬಿಂಬಿಸುವ ಶಿಲ್ಪಗಳು ಮತ್ತು ಕೆತ್ತನೆಗಳು ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬ ವ್ಯಕ್ತಿಯನ್ನು ಅಚ್ಚರಿಗೊಳಿಸುತ್ತವೆ. ಪ್ರವಾಸಿಗರು ಸಾಮಾನ್ಯವಾಗಿ ಇಲ್ಲಿಗೆ ಬೇಸಿಗೆ ಕಾಲದಲ್ಲಿ ಭೇಟಿ ನೀಡುತ್ತಾರೆ. ಇಲ್ಲಿನ ಕೊಳದ ಪ್ರಶಾಂತ ಮತ್ತು ತಂಪು ನೀರಿನಲ್ಲಿ ಸ್ನಾನ ಮಾಡಿ ಸಂತೋಷವನ್ನು ಅನುಭವಿಸುತ್ತಾರೆ. ಈ ಸ್ಥಳದ ಸಮೀಪದಲ್ಲಿಯೇ ಖಲ್ಲಿಕೋಟೆ ರಾಜನ ಅರಮನೆ ಮತ್ತು ಸಂಕಲೇಶ್ವರ ಮತ್ತು ಜಡೇಶ್ವರ ದೇವಸ್ಥಾನಗಳಿವೆ.