ಅಥಗಡಪಟ್ಟಣವು ಛತ್ರಪುರದಿಂದ 37 ಕೀಲೊ ಮೀಟರ ದೂರದಲ್ಲಿ ನೆಲೆಗೊಂಡಿದೆ. ಇದು ಐತಿಹಾಸಿಕ ನೆನೆಪುಗಳ ಶ್ರೀಮಂತಿಕೆಯನ್ನು ಹೊಂದಿದೆ. ಇದು ಪ್ರಸಿದ್ಧ ಕವಿಗಳಾದ ಕಬಿಸುರಿಯ ಬಲದೇವ ಮತ್ತು ಕಬಿ ಜಾದುಮನಿ ಮಹಾಪಾತ್ರರ ಜನ್ಮಸ್ಥಳವಾಗಿದೆ. ಅಥಗಡಪಟ್ಟಣದ ರಾಜನು ಪುರಿಯ ದೊರೆಯಾದ ಗಜಪತಿಗೆ ಆಶ್ರಯವನ್ನು ನೀಡಿದ್ದನು. ಅಲ್ಲದೇ ಜಗನ್ನಾಥನ ಮೂರ್ತಿಯನ್ನು ಕಲಪಹದರ ದಾಳಿಯಿಂದ ರಕ್ಷಿಸಲು ಅದನ್ನು ಮುಚ್ಚಿಡಲು ಸಹಾಯ ಮಾಡಿದ್ದನು ಎಂಬ ನಂಬಿಕೆ ಇದೆ.
ಅವನ ಆಡಳಿತದ ಅವಧಿಯಲ್ಲಿ ಜಗನ್ನಾಥನ ದೇವಾಲಯವನ್ನು ಇತರ ದೇವಾಲಯಗಳನ್ನು ಸಂಪೂರ್ಣವಾಗಿ ಎತ್ತರದ ಪರ್ವತಗಳು ಮತ್ತು ಅತೀಂದ್ರಿಯ ಕಾಡುಗಳ ನಡುವೆ ನಿರ್ಮಿಸಲಾಯಿತು. ಆಕ್ರಮಣವಾದ ನಂತರ ಜಗನ್ನಾಥನ ಮೂರ್ತಿಯನ್ನು ಪುರಿಯ ಅದರ ಮೂಲ ಸ್ಥಳಕ್ಕೆ ಸ್ಥಳಾಂತರಿಸಲಾಯಿತು ಮತ್ತು ನಂತರ ಅಥಗಡಪಟಣದ ದೇವಾಲಯವನ್ನು ಖಾಲಿ ಮಾಡಲಾಯಿತು. ಈ ದೇವಸ್ಥಾನವು ಇಂದಿನವರೆಗೂ ಖಾಲಿಯಾಗಿಯೇ ಉಳಿದಿದೆ.
ಈಗಲೂ ಸಹ ದೇವರಿಲ್ಲದ ಈ ದೇವಸ್ಥಾನದಲ್ಲಿ ಜಗನ್ನಾಥ ದೇವರಿಗೆ ಸಂಬಂಧಿಸಿದ ಎಲ್ಲ ಹಬ್ಬಗಳನ್ನು ಆಗಾಧವಾದ ಜನಸ್ತೋಮ ಮತ್ತು ವೈಭವದಿಂದ ಆಚರಿಸಲಾಗುತ್ತದೆ. ಈ ಸ್ಥಳವನ್ನು ಇಂದಿಗೂ ನೈಜ ಮತ್ತು ಹಾಳಾಗದ ಸ್ಥಿತಿಯಲ್ಲಿ ನೋಡಬಹುದು. ಈ ದೇವಾಲಯದ ಅದ್ಭುತ ಸೌಂದರ್ಯವು ಈ ಸ್ಥಳದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.