ಆರ್ಯಪಳ್ಳಿ ಕಡಲ ತೀರವು ಛತ್ರಪುರದಿಂದ ಆರು ಕೀಲೊ ಮೀಟರ ದೂರದಲ್ಲಿದ್ದು, ಇದು ಗಂಜಾಂದ ಜಿಲ್ಲಾ ಮುಖ್ಯ ಕೇಂದ್ರವಾಗಿದೆ. ಆರ್ಯಪಳ್ಳಿ ಕಡಲ ತೀರವು ತನ್ನ ಉತ್ತೇಜಕ ಹವಾಮಾನದಿಂದಾಗಿ ಹೆಸರುವಾಸಿಯಾಗಿದ್ದು, ಜಗತ್ತಿನಾದ್ಯಂತ ಇರುವ ಪ್ರವಾಸಿಗರನ್ನು ತನ್ನೆಡೆಗೆ ಆಕರ್ಷಿಸುತ್ತದೆ. ಇದರ ತೀರದ ಮೇಲೆ ಅಪಾರ ಪ್ರಮಾಣದ ಕಾಸೌರಿನ ಮರಗಳು ದಟ್ಟವಾಗಿ ಬೆಳೆದಿದ್ದು, ಈ ದೃಶ್ಯವು ಕಣ್ಣುಗಳಿಗೆ ಹಬ್ಬವನ್ನು ಉಂಟು ಮಾಡುತ್ತದೆ.
ಸೂರ್ಯನ ಬೆಳಕಿನ ಪ್ರತಿಫಲದೊಂದಿಗೆ ಈ ತೀರದ ಮರಳು ಸುವರ್ಣ ಕಂದು ಬಣ್ಣಕ್ಕೆ ತಿರುಗುತ್ತದೆ. ಇದು ಈ ಸ್ಥಳಕ್ಕೆ ಒಂದು ಅಮೋಘವಾದ ಸೌಂದರ್ಯವನ್ನು ಒದಗಿಸುತ್ತದೆ. ಈ ಸುಂದರ ಮರಳು ತೀರನೊಂದಿಗೆ ಇರುವ ಆಳವಾದ ನೀಲಿ ಸಮುದ್ರವು ಇಲ್ಲಿಗೆ ಬರುವ ಜನರಿಗೆ ಪ್ರಶಾಂತ ಮತ್ತು ವಿಶ್ರಾಂತ ಪರಿಸರವನ್ನು ಒದಗಿಸುತ್ತದೆ. ಈ ಮೂಲಕ ಜನರ ಒತ್ತಡ ನಿವಾರಣೆಯಾಗಿ ಚೈತನ್ಯವು ವರ್ಧನೆಯಾಗುತ್ತದೆ. ಈ ಸ್ಥಳದಲ್ಲಿ ಪ್ರವಾಸಿಗರು ಸಾಮಾನ್ಯವಾಗಿ ಆನಂದ ಅನುಭವಿಸುವ ಚಟುವಟಿಕೆಗಳೆಂದರೆ ಸೂರ್ಯಸ್ನಾನ ಮತ್ತು ಸರ್ಫಿಂಗ್.
ಇಲ್ಲಿ ಹಗಲು ರಾತ್ರಿಗಳ ಸಂಕ್ರಮಣದ ಕಾಲವನ್ನು ವೀಕ್ಷಿಸುವುದು ಯೋಗ್ಯವಾಗಿದೆ. ಏಕೆಂದರೆ ದಿಗಂತದಲ್ಲಿ ಕಂಡುಬರುವ ಸೂರ್ಯಾಸ್ತವು ನೋಡಲು ಸುಂದರವಾಗಿದ್ದು, ನಂತರ ಕಾಣುವ ಚಂದ್ರನ ಬೆಳಕು ಅಷ್ಟೇ ಆಕರ್ಷಣಿಯವಾಗಿರುತ್ತದೆ. ಆರ್ಯಪಳ್ಳಿಯಲ್ಲಿ ಕಂಡು ಬರುವ ಮರಳು ಮಿನರಲ್ ಪ್ರೊಜೆಕ್ಟ ಅನ್ನು ನೀವು ನೋಡಲೇಬೇಕು. ಆರ್ಯಪಳ್ಳಿಯನ್ನು ಭೇಟಿ ಕೊಡಲು ಯೋಗ್ಯವಾದ ಸಮಯ ಎಂದರೆ ಅಕ್ಟೋಬರನಿಂದ ಮಾರ್ಚ ತಿಂಗಳುಗಳು.