ಅಧ್ಯಾತ್ಮಿಕ ಒಲುವು ಇರುವ ಪ್ರವಾಸಿಗರಿಗೆ ಗಂಗೋತ್ರಿಯಲ್ಲಿರುವ ಗಂಗ್ನಾನಿ ಎಂಬ ಪುಟ್ಟ ಪಟ್ಟಣವು ಅತಿ ಸೂಕ್ತವಾದ ಸ್ಥಳವಾಗಿದೆ. ಈ ಪ್ರದೇಶವು ಧ್ಯಾನದಲ್ಲಿ ಮುಳುಗಿ ಹೋಗಲು ಪ್ರಶಸ್ತವಾಗಿದೆ. ಮನಶ್ಶಾಂತಿ ಬಯಸುತ್ತಿರುವವರಿಗಂತೂ ಇದು ಉತ್ತಮವಾಗಿ ಗುಣಮಟ್ಟದ ಸಮಯವನ್ನು ಕಳೆಯಬಲ್ಲ ತಾಣವಾಗಿದೆ.
ಸುಂದರವಾಗಿ ಗೋಚರಿಸುವಂತಹ ಪರ್ವತ ದೃಶ್ಯಗಳು, ಅಹ್ಲಾದಕರವಾದ ವಾತಾವರಣವನ್ನು ಹೊಂದಿರುವ ಈ ಪ್ರದೇಶ ಅನೇಕ ಪ್ರದೇಶಗಳಿಂದ ಜನರನ್ನು ಆಕರ್ಷಿಸುತ್ತದೆ. ರಿಷಿಕುಂಡ ಎಂಬ ನೈಸರ್ಗಿಕ ಬಿಸಿ ನೀರಿನ ಬುಗ್ಗೆ ಇಲ್ಲಿದ್ದು, ಪ್ರವಾಸಿಗರು/ಭಕ್ತರು ಗಂಗೋತ್ರಿಗೆ ಭೇಟಿ ನೀಡುವ ಮುನ್ನ ಇದರಲ್ಲಿ ಸ್ನಾನ ಮಾಡುವುದು ಸಾಮಾನ್ಯ. ಗಂಗ್ನಾನಿಗೆ ಹತ್ತಿರದಲ್ಲಿ ಭಾತ್ವಾರಿ ಎಂಬ ಸುಂದರ ದೇವಾಲಯವಿದೆ. ಈ ದೇವಾಲಯವು ವೇದ ವ್ಯಾಸ ಮುನಿಗಳ ತಂದೆ ಹಾಗು ಪ್ರಸಿದ್ಧ ಋಷಿಯಾದ ಪರಾಶರರಿಗೆ ಸಮರ್ಪಿತವಾಗಿದೆ.