ಇದು 500 ವರ್ಷಗಳಷ್ಟು ಹಳೆಯದಾದ ದೇವಾಲಯ. ಬೆಯ್ಟ್ ದ್ವಾರಕಕ್ಕೆ ತಲುಪಲು ಓಕಾ ಬಂದರು ಜೆಟ್ಟಿಗೆ ಬಂದು ಇಲ್ಲಿಂದ ದೋಣಿಯಲ್ಲಿ ಹೋಗಬೇಕು. ಇದು 5 ಕಿಮೀ ದೂರದಲ್ಲಿದೆ. ಈ ದೇವಾಲಯವನ್ನು ವಲ್ಲಭಾಚಾರ್ಯನು ಕಟ್ಟಿದನೆಂದು ಹೇಳಲಾಗುತ್ತದೆ. ಇಲ್ಲಿರುವ ವಿಗ್ರಹವನ್ನು ಸ್ವತಃ ರುಕ್ಮಣಿಯೇ ಮಾಡಿದಳೆಂದು ಹೇಳಲಾಗುತ್ತದೆ. ಮತ್ತು ಪ್ರಸಿದ್ಧ ಐತಿಹ್ಯದ ಪ್ರಕಾರ ಕೃಷ್ಣನ ಗೆಳೆಯ ಸುಧಾಮನು ಅವನನ್ನು ನೋಡಲು ಬಂದಾಗ ನೀಡಲು ಬೇರೇನೂ ಇಲ್ಲದೆ ಅವಲಕ್ಕಿಯನ್ನು ನೀಡಿದ್ದನಂತೆ. ಆದ್ದರಿಂದ ಈವತ್ತಿಗೂ ಈ ಪ್ರದೇಶದಲ್ಲಿನ ಬ್ರಾಹ್ಮಣರಿಗೆ ಭಕ್ತರು ಮತ್ತು ಇಲ್ಲಿಗೆ ಭೇಟಿನೀಡುವವರು ಅವಲಕ್ಕಿಯನ್ನು ಕೊಡುಗೆಯಾಗಿ ನೀಡುತ್ತಾರೆ.