ದ್ವಾರಕೆಯ ಪ್ರಸಿದ್ಧ ಪ್ರವಾಸಿ ತಾಣವಾದ ಇದೊಂದು ಸಣ್ಣ ಕೊಳ. ಇಲ್ಲೇ ಕೃಷ್ಣನು ಗೋಪಿಕಾ ಸ್ತ್ರೀಯರೊಡನೆ ರಾಸಲೀಲೆಯಾಡಿದ್ದ ಎಂದು ಹೇಳಲಾಗುತ್ತದೆ. ಇದು ದ್ವಾರಕ ನಗರದಿಂದ 20 ಕಿಮೀ ದೂರದಲ್ಲಿದೆ. ಈ ಕೊಳದ ಸುತ್ತಲೂ ಇರುವ ಮರಳು ನುಣ್ಣಗಿದ್ದು ಹಳದಿ ಬಣ್ಣದಲ್ಲಿದೆ. ಇದನ್ನು ಭಕ್ತಾದಿಗಳು ತಿಲಕವಿಡಲು ಬಳಸುತ್ತಾರೆ. ಈ ಕೊಳದ ಹಿಂದೆ ಹಲವು ಕುತೂಹಲಕಾರಿ ಕತೆಗಳಿವೆ. ಅವುಗಳಲ್ಲಿ ಒಂದರ ಪ್ರಕಾರ ಬೃಂದವಾನದಲ್ಲಿ ಕೃಷ್ಣನೊಂದಿಗೆ ರಾಸಲೀಲೆಯಾಡಿದ ಗೋಪಿಕೆಯರು ಅವನು ದ್ವಾರಕೆಗೆ ಹೋದನಂತರ ಅವನಿಂದ ದೂರವಾದದ್ದನ್ನು ಸಹಿಸಲಾರದೆ ಹೋದರಂತೆ. ಆದ್ದರಿಂದ ಹುಣ್ಣಿಮೆಯ ರಾತ್ರಿಗಳಂದು ತಾಲಬ್ಗೆ ಬಂದು ಅವನೊಡನೆ ಇಲ್ಲಿ ನೃತ್ಯ ಮಾಡುತ್ತಿದ್ದರಂತೆ.