ಶಿವನಾಥ್ ನದಿಯ ದಂಡೆಯ ಮೇಲಿರುವ ಶ್ರೀ ಉವಾಸ್ಸಗ್ಗಹರಂ ಪಾರ್ಶ್ವ ತೀರ್ಥವು 1995 ರಲ್ಲಿ ನಿರ್ಮಿಸಲಾದ ಜೈನರ ಪವಿತ್ರ ದೇಗುಲವಾಗಿದೆ. ಇದರ ಪ್ರಮುಖ ಆಕರ್ಷಣೆಯೆಂದರೆ ಪಾರ್ಶ್ವನಾಥನ ಪ್ರತಿಮೆಯಿರುವ 30 ಅಡಿ ಎತ್ತರದ ಬೃಹತ್ ಬಾಗಿಲು. ಈ ಬೃಹತ್ ಪ್ರತಿಮೆಯು ನಾಲ್ಕು ಖಂಬಗಳಿಂದ ಆಶ್ರಯಿಸಲ್ಪಟ್ಟಿದೆ. ಈ ನಾಲ್ಕು ಖಂಬಗಳು ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕೆ ಬೇಕಾಗಿರುವ ಬುದ್ಧಿ, ಆಂತರಿಕ ವಿಮರ್ಶೆ, ಒಳ್ಳೆಯ ನಡತೆ ಮತ್ತು ಕಠಿಣ ತಪಸ್ಸುಗಳೆಂಬ ತತ್ವಗಳನ್ನು ಸೂಚಿಸುತ್ತವೆ.
ಪ್ರವಾಸಿಗರು ಈ ಪ್ರತಿಮೆಯನ್ನು ಎರಡು ಆನೆಗಳು ಪೂಜಿಸುತ್ತಿರುವುದನ್ನು ಗಮನಿಸಬಹುದು. ಇಲ್ಲಿ ದೇವಾಲಯಗಳು, ಅತಿಥಿ ಗೃಹಗಳು, ನ್ಯಾಚುರೋಪಥಿ, ಯೋಗ ಕೇಂದ್ರ ಹಾಗು ಉದ್ಯಾನವನ್ನು ಕಾಣಬಹುದು. ಪ್ರತಿಮೆಯಿಂದ ಬೀಲುವ ಅಮಿಯಾ ಎಂಬ ಪವಿತ್ರ ನೀರನ್ನು ಇಲ್ಲಿ ಕಾಣಬಹುದು. ಪೂರ್ಣಿಮೆಯಂದ ಬಹು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ.


Click it and Unblock the Notifications