ರೆಮುನಾ, ಧಾರ್ಮಿಕ ಸ್ಥಳವಾಗಿದ್ದು, ಬಾಳೇಶ್ವರ ಜಿಲ್ಲಾ ವ್ಯಾಪ್ತಿಗೆ ಬರುತ್ತದೆ, ಇಲ್ಲಿ ಸ್ಥಳೀಯರೇ ವಾಸಿಸುತ್ತಾರೆ. ಇದು ಚಂಡಿಪುರದಿಂದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಗೋಪಿನಾಥ್ ದೇವರ ಮಂದಿರವಿದ್ದು ಇದನ್ನು ಖೀರ್ ಚೋರ್ ಗೋಪಿನಾಥ್ ದೇವಾಲಯವೆಂದೂ ಕರೆಯುತ್ತಾರೆ.
ಈ ದೇವಾಲಯವು ಶತಮಾನದಷ್ಟು ಹಳೆಯದಾಗಿದ್ದು, ಇಲ್ಲಿಗೆ ಶ್ರೀ ಚೈತನ್ಯ ಮಹಾಪ್ರಭು ತಮ್ಮ ಶಿಷ್ಯರೊಂದಿಗೆ ಮತ್ತು ತನ್ನ ಗುರು ಮಾಧೀಬೇಂದ್ರ ಪುರಿ ಜೊತೆ ಭೇಟಿ ನೀಡಿದ್ದರು ಎನ್ನುವುದು ನಂಬಿಕೆ. ವಿಶೇಷವಾಗಿ ತಯಾರಿಸಿದ ಖೀರ್ ಅನ್ನು ದೇವರಿಗೆ ಸಮರ್ಪಣೆ ಮಾಡಲಾಗುತ್ತದೆ ಮತ್ತು ಅದನ್ನು ಪ್ರಸಾದದ ರೂಪದಲ್ಲಿ ಭಕ್ತಾದಿಗಳಿಗೆ ಹಂಚಲಾಗುತ್ತದೆ.
ಜನ್ಮಾಷ್ಠಮಿ ಮತ್ತು ಚಂದನ್ ಪೂರ್ಣಿಮಾವನ್ನು ರೆಮುನಾದಲ್ಲಿ ಆಚರಿಸಲಾಗುತ್ತದೆ. ರೆಮುನಾಗೆ ಭೇಟಿ ನೀಡುವವರು ಧಾತು ಮೇಲಿನ ಕೆಲಸದ ಕಸೂರಿಯನ್ನು ಮರೆಯದೇ ಖರೀದಿಸುವುದು ಉತ್ತಮ ಸಲಹೆ. ಇದನ್ನು ಕಂಚು ಮತ್ತು ಹಿತ್ತಾಳೆಯಿಂದ ತಯಾರಿಸಲಾಗುತ್ತದೆ.
ಇಲ್ಲಿಗೆ ಸಮೀಪದಲ್ಲಿ ಹಲವು ದೇವಾಲಯಗಳು, ಮಠಗಳಿವೆ. ರಾಮಚಂಡಿ ದೇವಾಲಯ, ಗರಗೇಶ್ವರ ದೇವಾಲಯ, ಮಾಧೀಬೇಂದ್ರ ಮಠ ಮತ್ತು ಗೌದಿತ್ಯ ಮಠ ಇದರಲ್ಲಿ ಪ್ರಮುಖವಾದದ್ದು.


Click it and Unblock the Notifications