ಹಿಂದೂ ದೇವತೆ ಬರಾಹಿ ದೇವರನ್ನು ಪೂಜಿಸಲ್ಪಡುವ ಬರಾಹಿ ದೇವಾಲಯ ದೇವಿಧುರಾದಲ್ಲಿ ಇದೆ. ಇದು ಚಂಪಾವತ್ ನಿಂದ 58 ಕಿ.ಮೀ ದೂರದಲ್ಲಿದೆ. ಈ ದೇವಸ್ಥಾನದ ಆವರಣದಲ್ಲಿ ದೊಡ್ಡ ದೊಡ್ಡ ಕಲ್ಲುಗಳು ಇವೆ. ಇವನ್ನು ಪಾಂಡವರು ಚೆಂಡನ್ನಾಗಿ ಆಡಲು ಬಳಸುತ್ತಿದ್ದರು ಎಂದು ನಂಬಲಾಗಿದೆ. (ಹಿಂದೂ ಮಹಾಕಾವ್ಯ ಮಹಾಭಾರತದ ರಾಜರು)
ಇಲ್ಲಿನ ಬಗ್ವಾಲ್ ಜಾತ್ರೆ ಪ್ರತಿ ವರ್ಷ ರಕ್ಷಾ ಬಂಧನದ ದಿನದಂದು ನಡೆಯುತ್ತದೆ. ಇದು ಭಾರತದ ಹಲವು ಭಾಗಗಳ ಜನರು ಮತ್ತು ನೇಪಾಳದಿಂದಲೂ ಜನರನ್ನು ಆಕರ್ಷಿಸುತ್ತದೆ. ಈ ಜಾತ್ರೆಯ ಸಂದರ್ಭದಲ್ಲಿ ಎರಡು ಗುಂಪುಗಳು ಹಾಡು, ಕುಣಿತ ಹಾಗೂ ಒಬ್ಬರು ಇನ್ನೊಬ್ಬರ ಮೇಲೆ ಕಲ್ಲು ಎಸೆಯುವುದರಲ್ಲಿ ತೊಡಗುತ್ತಾರೆ. ಎರಡು ಗುಂಪುಗಳ ಜನರಿಗೆ ಮರದ ದೊಡ್ಡ ಪಟ್ಟಿಯನ್ನು ತಮ್ಮ ರಕ್ಷಣೆಗೆಗಾಗಿ ಕೊಡಲಾಗಿರುತ್ತದೆ. ಈ ಆಚರಣೆಯ ಹಿಂದಿರುವ ಧಾರ್ಮಿಕ ಕಾರಣದಿಂದಾಗಿ ಜನರು ತಮಗೆ ಆಗುವ ಗಾಯಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಹಲವಾರು ವರ್ಷಗಳಿಂದ ಇಲ್ಲಿ ಈ ಆಚರಣೆ ನಡೆಯುತ್ತಿದ್ದರೂ ಯಾರಿಗೂ ದೊಡ್ಡ ಮಟ್ಟದ ಗಾಯಗಳಾದ ಬಗ್ಗೆ ಪುರಾವೆಯಿಲ್ಲ.