ಚಂಪಾವತ್ ಜಿಲ್ಲೆಯೆ ಒಂದು ಸುಂದರವಾದ ದೇವಾಲಯ ಬಲೇಶ್ವರ ದೇವಾಲಯ. ಇದನ್ನು ಚಂದ ರಾಜವಂಶದ ರಾಜ ಕಟ್ಟಿಸಿದ ಎಂದು ನಂಬಲಾಗಿದೆ. ಇಲ್ಲಿ ಹಿಂದೂ ದೇವರಾದ ಬಲೇಶ್ವರ, ರತ್ನೇಶ್ವರ ಮತ್ತು ಚಂಪಾವತಿ ದುರ್ಗೆಯರನ್ನು ಪೂಜಿಸಲಾಗುತ್ತದೆ. ಮಂಟಪ ಮತ್ತು ಛಾವಣಿ ಹಲವಾರು ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ್ದು, ನೋಡಲು ಆಕರ್ಷಕವಾಗಿದೆ.
ಏಕ್ ಹಾಥಿಯಾ ಕಾ ನೌಲಾ ಚಂಪಾವತ್ ನಿಂದ 5 ಕಿ.ಮೀ ದೂರದಲ್ಲಿದ್ದು ವಿಶೇಷವಗಿ ಕೆತ್ತಲಾದ ಕಲ್ಲಿನ ಕೆತ್ತನೆಯಾಗಿದೆ. ಇದು ಇದರ ಜೊತೆಗೆ ಇರುವ ಕಥೆಗಳಿಂದ ಬಹಳ ಪ್ರಸಿದ್ಧವಾಗಿದೆ. ಇದರ ಪ್ರಕಾರ, ಈ ಇಡಿ ಕಟ್ಟಡವನ್ನು ಒಂದು ಕೈ ಇಲ್ಲದ ಶಿಲ್ಪಿ ಒಂದೇ ರಾತ್ರಿಯಲ್ಲಿ ನಿರ್ಮಾಣ ಮಾಡಿದ್ದ.
ಆದಿತ್ಯ ದೇವಾಲಯ ರಾಮಕ್ ಹಳ್ಳಿಯಲ್ಲಿರುವ ಹಳೆಯ ಕಾಲದ ದೇವಾಲಯ. ಇದು ಶಿಖರಗಳು, ಹೂವಿನ ಕಣಿವೆಗಳು ಮತ್ತು ಹಚ್ಚ ಹಸಿರಾದ ನಿಸರ್ಗ ಸೌಂದರ್ಯದಿಂದ ಆವೃತ್ತವಾಗಿದೆ. ಇಲ್ಲಿ ಹಿಂದೂ ದೇವತೆ ಸೂರ್ಯನನ್ನು ಆರಾಧಿಸಲಾಗುತ್ತಿದ್ದು ದೊಡ್ಡ ಸಂಖ್ಯೆಯ ಭಕ್ತರು ಪ್ರತಿವರ್ಷ ಇಲ್ಲಿಗೆ ಆಗಮಿಸುತ್ತಾರೆ. ಒಂದು ನಂಬಿಕೆಯ ಪ್ರಕಾರ, ಈ...
ಚಂಪಾವತ್ ನಿಂದ 14 ಕಿ.ಮೀ ದೂರದಲ್ಲಿರುವ ಲೋಹಾಘಾಟ್ ಇತಿಹಾಸ ಪ್ರಸಿದ್ಧವಾದ ಸ್ಥಳವಾಗಿದೆ. ಇದು ಲೋಹಾವತಿ ನದಿಯ ದಂಡೆಯ ಮೇಲೆ ಇದೆ. ಪಿ.ಬಾರನ್ ಇಲ್ಲಿನ ಸೌಂದರ್ಯಕ್ಕೆ ಮನಸೋತು ಕಾಶ್ಮೀರದ ನಂತರದ ಸ್ವರ್ಗ ಎಂದು ಕರೆದಿದ್ದಾರೆ. ಉತ್ತರಾಖಂಡದ ಚಂಪಾವತ್ ನ ಒಂದು ನಗರ ಪಂಚಾಯತ್ ಇದಾಗಿದೆ. ಇಲ್ಲಿನ ಹಲವು ಹಳೆಯ ದೇವಾಲಯಗಳು...
ಮಾಯಾವತಿ ಆಶ್ರಮವನ್ನು ಅದ್ವೈತ ಆಶ್ರಮ ಎಂದೂ ಕರೆಯುತ್ತಾರೆ. ಇದು ಚಂಪಾವತ್ ನಿಂದ 22 ಕಿ.ಮೀ ದೂರದಲ್ಲಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 1940 ಮೀ ಎತ್ತರದಲ್ಲಿದ್ದು ಭಾರತ ಮತ್ತು ವಿದೇಶ ಸೇರಿದಂತೆ ಬಹಳ ಮಂದಿ ಪ್ರವಾಸಿಗರನ್ನು ಸೆಳೆಯುತ್ತದೆ.
1898 ರಲ್ಲಿ ಸ್ವಾಮಿ ವಿವೇಕಾನಂದರು ಅಲ್ಮೋರಾಗೆ ಮೂರನೆಯ ಬಾರಿ ಭೇಟಿ...
ಹಿಂದೂ ದೇವತೆ ಬರಾಹಿ ದೇವರನ್ನು ಪೂಜಿಸಲ್ಪಡುವ ಬರಾಹಿ ದೇವಾಲಯ ದೇವಿಧುರಾದಲ್ಲಿ ಇದೆ. ಇದು ಚಂಪಾವತ್ ನಿಂದ 58 ಕಿ.ಮೀ ದೂರದಲ್ಲಿದೆ. ಈ ದೇವಸ್ಥಾನದ ಆವರಣದಲ್ಲಿ ದೊಡ್ಡ ದೊಡ್ಡ ಕಲ್ಲುಗಳು ಇವೆ. ಇವನ್ನು ಪಾಂಡವರು ಚೆಂಡನ್ನಾಗಿ ಆಡಲು ಬಳಸುತ್ತಿದ್ದರು ಎಂದು ನಂಬಲಾಗಿದೆ. (ಹಿಂದೂ ಮಹಾಕಾವ್ಯ ಮಹಾಭಾರತದ ರಾಜರು)
ಇಲ್ಲಿನ...
ಬಾಣಾಸುರ್ ಕಾ ಕಿಲಾ ಸಮುದ್ರ ಮಟ್ಟದಿಂದ ಸುಮಾರು 1859 ಮೀ ಎತ್ತರದಲ್ಲಿರುವ ಪ್ರದೇಶವಾಗಿದೆ. ಇದು ಲೋಹಾಘಾಟ್ ನಿಂದ ಸುಮಾರು 7 ಕಿ.ಮೀ ದೂರದಲ್ಲಿದೆ. ಇದನ್ನು ಮಧ್ಯಯುಗದಲ್ಲಿ ಕಟ್ಟಲಾಗಿದೆ ಎಂದು ನಂಬಲಾಗಿದೆ. ಪುರಾಣದ ಕಥೆಯ ಪ್ರಕಾರ, ಬಾಣಾಸುರ ಎಂಬ ರಕ್ಕಸನನ್ನು ಶ್ರೀ ಕೃಷ್ಣನು ಇಲ್ಲೆ ಸಂಹರಿಸಿದ್ದನು.
ಕ್ರಾಂತೇಶ್ವರ ಮಹಾದೇವ ದೇವಾಲಯ ಸಮುದ್ರ ಮಟ್ಟದಿಂದ 6000 ಮೀ ಎತ್ತರದಲ್ಲಿದೆ. ಇಲ್ಲಿ ಹಿಂದೂ ದೇವರಾದ ಶಿವನನ್ನು ಆರಾಧಿಸಲಾಗುತ್ತದೆ. ಇಲ್ಲಿ ಅವನನ್ನು ಕಾಂದೇವ್ ಮತ್ತು ಕೂರ್ಮಪಾದ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಇದು ಚಂಪಾವತ್ ನಿಂದ ಸುಮಾರು 6 ಕಿ.ಮೀ ದೂರದಲ್ಲಿದೆ.
ಚೌಮು ದೇವಾಲಯ ಹಿಂದೂ ದೇವರಾದ ಶಿವನ ಆರಾಧನೆಗೆ ಮೀಸಲಾಗಿದೆ. ಇಲ್ಲಿ ವರ್ಷಪೂರ್ತಿ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇಲ್ಲಿ ಶಿವ ದೇವರನ್ನು ಪ್ರಾಣಿಗಳ ರಕ್ಷಕ ಎಂದು ಪೂಜಿಸಲಾಗುತ್ತದೆ ಹಾಗೂ ಘಂಟೆಗಳು ಮತ್ತು ಹಾಲನ್ನು ಕೊಡುಗೆಯಾಗಿ ನೀಡಲಾಗುತ್ತದೆ. ವಾರ್ಷಿಕವಗಿ ನಡೆಯುವ ಉತ್ತರಾಯನಿ ಮೇಳ ಇಲ್ಲಿ ಮಕರ ಸಂಕ್ರಾಂತಿಯ...
ಪಾತಾಲ್ ರುದ್ರೇಶ್ವರ ಒಂದು ಗುಹೆಯಾಗಿದ್ದು ಇದನ್ನು 1993 ರಲ್ಲಿ ಕಂಡುಹಿಡಿಯಲಾಗಿತ್ತು. ಗುಹೆಯ ಉದ್ದ ನಲವತ್ತು ಮೀ ಇದ್ದು ಅಗಲ ಸುಮಾರು 18 ಮೀ ಆಗಿದೆ. ಇಲ್ಲಿನ ನಂಬೆಕಗಳ ಪ್ರಕಾರ, ಶಿವ ದೇವರು ಮುಕ್ತಿಯನ್ನು ಪಡೆಯಲು ಇಲ್ಲಿ ತಪಸ್ಸನ್ನಾಚರಿಸಿದ್ದರು. ಇನ್ನೊಂದು ಕಥೆಯ ಪ್ರಕಾರ, ದುರ್ಗಾ ದೇವಿ ಇಲ್ಲಿನ ಸ್ಥಳೀಯನೊಬ್ಬನ...
ಪೂರ್ಣಗಿರಿ ದೇವಾಲಯ ಸಮುದ್ರ ಮಟ್ಟದಿಂದ ಸುಮಾರು 3000 ಮೀ ಎತ್ತರದಲ್ಲಿದೆ. ಹಿಂದೂ ಉತ್ಸವ ಚೈತ್ರ ನವರಾತ್ರಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಈ ದೇವಾಲಯದಲ್ಲಿ ನಡೆಯುತ್ತದೆ. ಈ ಉತ್ಸವದ ಸಂದರ್ಭದಲ್ಲಿ ಇಲ್ಲಿ ದೊಡ್ಡ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಇಲ್ಲಿಯೇ ಸಮೀಪದಲ್ಲಿ ಕಾಳಿ ನದಿ ಹರಿಯುತ್ತಿದ್ದು ಇಲ್ಲಿನ ಜನರು...
ಗ್ವಾಲ್ ದೇವತೆಯನ್ನು ಗೋರಿಲ್ ಮತ್ತು ಗೋಲ್ ದೇವರೆಂದೂ ಕರೆಯುತ್ತಾರೆ ಹಾಗೂ ನ್ಯಾಯದ ದೇವತೆ ಎಂದೂ ಹೆಸರುವಾಸಿಯಾಗಿದೆ. ಗ್ವರಾಲಿ ಚೌರ್ ನಲ್ಲಿ ಈ ದೇವತೆಗೆ ಒಂದು ದೇವಾಲಯವನ್ನು ಕಟ್ಟಲಾಗಿದೆ. ಇಲ್ಲಿನ ಜನರ ನಂಬಿಕೆಗಳ ಪ್ರಕಾರ, ಈಕೆ ಕತ್ಯೂರಿ ರಾಜವಂಶದ ಮಗಳಾಗಿದ್ದು ಆಕೆಯನ್ನು ನದಿಗೆ ಎಸೆಯಲಾಗಿತ್ತು. (ತನ್ನ ಮಲತಾಯಿ ಮಾಡಿದ...
ಪಂಚೇಶ್ವರವು, ಕಾಳಿ ಮತ್ತು ಸರಯೂ ನದಿಗಳ ಸಂಗಮ ಸ್ಥಾನದಲ್ಲಿ ಇದೆ. ಈ ಎರಡು ನದಿಗಳು ಸೇರುವಲ್ಲಿ ಬಂದು ನದಿಯಲ್ಲಿ ಮುಳುಗುವುದು ಬಹಳ ಪವಿತ್ರವಾದುದೆಂದು ನಂಬಲಾಗಿದೆ. ಇದು ನೇಪಾಳದೊಂದಿಗೆ ತನ್ನ ಗಡಿರೇಖೆಯನ್ನು ಹಂಚಿಕೊಂಡಿದೆ. ಇಲ್ಲೇ 6000 ಮೆ.ವ್ಯಾ ವಿದ್ಯುತ್ ಉತ್ಪಾದಿಸುವ ಜಲಾಶಯ ಕೂಡ ಇದೆ.