ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ನಂದಪ್ರಯಾಗ್ ನಗರ ಇದೆ. ಈ ನಗರವು ಅಲಕಾನಂದಾ ಹಾಗೂ ನಂದಾಕಿನಿ ಎಂಬ ನದಿಗಳ ದಂಡೆಯ ಮೇಲೆ ಹರಡಿಕೊಂಡಿದೆ. ಅನೇಕ ಭಕ್ತರು ನಂಬಿಕೆಗಳ ಪ್ರಕಾರ, ತಮ್ಮ ಪಾಪಗಳನ್ನು ತೊಳೆದುಕೊಳ್ಳಲು ಈ ನದಿಗಳು ಸಂಗಮವಾಗುವ ಸ್ಥಳದಲ್ಲಿ ಮುಳುಗಿ ಸ್ನಾನ ಮಾಡುತ್ತಾರೆ. ಪುರಾಣ ಕಥೆಗಳ ಪ್ರಕಾರ, ನಂದಪ್ರಯಾಗ್ ಯದು ವಂಶರ ಕಾಲದಲ್ಲಿದ್ದ ನಗರ ಎಂದು ಹೇಳಲಾಗಿದೆ.
ಕೇದಾರ್ ನಾಥ್ ಹಾಗೂ ಬದರೀನಾಥ್ ಗೆ ಹೋಗಲು ಇರುವ ಐದು ಪ್ರಮುಖ ದ್ವಾರಗಳಲ್ಲಿ ಇದೂ ಕೂಡ ಒಂದು ಆಗಿರುವುದರಿಂದ ನಂದಪ್ರಯಾಗ್ ಅತ್ಯಂತ ಪ್ರಸಿದ್ದ ಯಾತ್ರಾ ಸ್ಥಳವಾಗಿದೆ. ಇತರ ಪ್ರಯಾಗ್ ಗಳೆಂದರೆ ವಿಷ್ಣುಪ್ರಯಾಗ್, ಕರ್ಣಪ್ರಯಾಗ್, ರುದ್ರಪ್ರಯಾಗ್ ಹಾಗೂ ದೇವ್ ಪ್ರಯಾಗ್. ನಂದಪ್ರಯಾಗ್ ನಲ್ಲಿ ಹಿಮದಿಂದ ಸಂಪೂರ್ಣವಾಗಿ ಆವರಿಸಲ್ಪಟ್ಟ ಬೆಟ್ಟಗಳೇ ಇರುವುದರಿಂದ ಇಲ್ಲಿನ ಪ್ರಕೃತಿ ಸೌಂದರ್ಯ ಅತ್ಯಂತ ಮನಮೋಹಕವಾಗಿದೆ. ಅಲಕಾನಂದಾ ನದಿಯ ತಟದಲ್ಲಿರುವ ಗೋಲಾಲ್ ಜೀ ದೇವಸ್ಥಾನಕ್ಕೆ ದೇಶದ ಮೂಲೆ ಮೂಲೆಯಿಂದ ಅನೇಕ ಭಕ್ತರು ಆಗಮಿಸುತ್ತಾರೆ.