ಅಮೃತಸರದಿಂದ 7 ಕಿ.ಮೀ. ದೂರದಲ್ಲಿರುವ ಕಿ ವಡಾಲಿ ಎಂಬ ಹಳ್ಳಿಯ ಬಳಿ ಗುರುದ್ವಾರಾ ಛೇಹರತಾ ಸಾಹೀಬ್ ಉಪಸ್ಥಿತವಿದೆ. ಆರನೇ ಸಿಖ್ ಗುರುವಾದ ಗುರು ಹರಗೋಬಿಂದ್ ಜಿಯವರು ಇದೇ ಹಳ್ಳಿಯಲ್ಲಿ ಜನಿಸಿದರು. ತಮ್ಮ ಮಗನ ಜನ್ಮವನ್ನು ಆಚರಿಸಲು ಗುರು ಅರ್ಜುನ ದೇವಜಿ ಅವರು ಒಂದು ದೊಡ್ಡ ಛೇಹರತಾ ಎಂಬ ಬಾವಿಯನ್ನು ಕಟ್ಟಿಸಿದರು. ಮಂಚೆ ಈ ಬಾವಿಯಲ್ಲಿ ನೀರನ್ನು ಸೇದಲು 6 ಪರ್ಶಿಯನ್ ರಾಟೆಯನ್ನು ಅಥವಾ ಚಕ್ರವನ್ನು ಅಳವಡಿಸಿದ್ದರು. ಆದರೆ, ಪ್ರಸ್ತುತ ಇನ್ನು ತೆಗೆದು ನೀರನ್ನು ಮುಖ್ಯ ಸರೋವರಕ್ಕೆ ಪಂಪ್ ಮಾಡಲು ಬಳಸುತ್ತಾರೆ.
ಪುರಾತನ ಬಾವಿಯ ನೆನಪಿನಲ್ಲಿ ಹೆಸರಿಸಲಾದ ಈ ಗುರುದ್ವಾರಾದ ದೊಡ್ಡ ದಿವಾನ್ ಹಾಲ್ನಲ್ಲಿ ಚೌಕಾಕಾರದ ಗರ್ಭಗುಡಿಯ ಮಧ್ಯಭಾಗದಲ್ಲಿದೆ. ಗರ್ಭಗುಡಿಯ ಮೇಲೆ ಕಮಲದ ಗುಮ್ಮಟವಿದೆ. ಈ ಗೋಪುರಕ್ಕೆ ಬಂಗಾರದ ತಗಡನ್ನು ಹೊದಿಸಲಾಗಿದೆ. ಈ ದೈವಿಕ ಹಾಲಿನ ಮುಂಭಾಗದಲ್ಲಿ ಸುಮಾರ್ 25 ಮೀಟರ್ ಎತ್ತರವಿರುವ 2 ಧ್ವಜ ಸ್ತಂಭಗಳಿವೆ. ಇವೆರಡರಲ್ಲಿ ಸಿಖ್ರ ಧ್ವಜಗಳನ್ನು ಹಾರಿಸಲಾಗುತ್ತದೆ. ಇದಕ್ಕೆ 'ನಿಶಾನ್ ಸಾಹೀಬ್' ಎಂದು ಕರೆಯುತ್ತಾರೆ. ಶಿರೋಮಣಿ ಗುರುದ್ವಾರ ಪರಬಂಧಕ್ ಸಮೀತಿಯು ಮೇಲುಸ್ತುವಾರಿಯನ್ನು ತೆಗೆದುಕೊಂಡ ಈ ಗುರುದ್ವಾರಾಕ್ಕೆ ಪ್ರವಾಸಿಗರು ಭೇಟಿ ನೀಡುವುದು ಸೂಕ್ತ.