ವಾಡಲಿ ತಲಾವ್ ಚಾಂದೂರ್ ರೈಲ್ವೆ ರಸ್ತೆಯಲ್ಲಿ ಕಾಣಸಿಗುತ್ತದೆ. ಇದು ಅಮ್ರಾವತಿಗೆ ಸಮೀಪವಿರುವ ಪ್ರಸಿದ್ಧ ಜಲಾಶಯವಾಗಿದೆ. ಇದನ್ನು ಈ ನಗರಕ್ಕೆ ತಾಜಾ ಮತ್ತು ಶುದ್ಧ ನೀರನ್ನು ಸರಬರಾಜು ಮಾಡಲು ನಿರ್ಮಿಸಲಾಗಿದೆ.
ಇಲ್ಲಿಗೆ ಸಮೀಪದ ಮೃಗಾಲಯ ಮತ್ತು ಉದ್ಯಾನಗಳು ಸ್ಥಳೀಯರ ಒತ್ತಡವನ್ನು ಪರಿಹರಿಸುವ ಸಾಧನಗಳಾಗಿವೆ. ಸ್ಥಳೀಯರು ಮತ್ತು ಪ್ರವಾಸಿಗರು ವಾರಾಂತ್ಯಗಳಲ್ಲಿ ದೋಣಿವಿಹಾರಕ್ಕೆ ಮತ್ತು ಮೋಜು ಮಾಡಲು ಆಗಮಿಸುತ್ತಿರುತ್ತಾರೆ. ಮಕ್ಕಳಿಗೆ ಈ ಸ್ಥಳ ತುಂಬ ಅಚ್ಚುಮೆಚ್ಚು.