1970 ರಿಂದ ಆಂಧ್ರ ಪ್ರದೇಶ ಅರಣ್ಯ ಇಲಾಖೆಯಿಂದ ನಿಯಂತ್ರಿಸಲ್ಪಡುತ್ತಿರುವ ವನ್ಯಮೃಗ ಅಭಯಾರಣ್ಯ ಕಂಬಲಕೊಂಡ. ಇಲ್ಲಿರುವ ಕಂಬಲಕೊಂಡ ಪರ್ವತಗಳಿಂದಾಗಿ ಈ ಅಭಯಾರಣ್ಯಕ್ಕೆ ಈ ಹೆಸರು ಬಂದಿದೆ. ಅಭಯಾರಣ್ಯವು ನಿತ್ಯಹರಿದ್ವರ್ಣ ಕಾಡಿನ 71 ಚದರ ಕಿಲೋಮೀಟರ್ ಪ್ರದೇಶವನ್ನು ಆವರಿಸಿಕೊಂಡಿದ್ದು, ಇಲ್ಲಿ ವಿವಿಧ ಪ್ರಭೇದದ ಸಸ್ಯ ಮತ್ತು ಪ್ರಾಣಿಗಳನ್ನು ಅವುಗಳ ಸ್ವಾಭಾವಿಕ ರೀತಿಯಂತೆ ಸಂರಕ್ಷಿಸಲಾಗಿದೆ. ಅಳಿವಿನಂಚಿನಲ್ಲಿರುವ ಭಾರತೀಯ ಚಿರತೆಗಳು ಮತ್ತು ರಸೆಲ್ ವೈಪರ್ಗಳು, ಭಾರತೀಯ ನಾಗರಹಾವು, ಭಾರತೀಯ ನರಿಗಳು, ಭಾರತೀಯ ಮುಂಟಜಾಕ್ ಮತ್ತು ಏಷ್ಯನ್ ಪ್ಯಾರಡೈಸ್ ಫ್ಲೈಕ್ಯಾಚರ್ಗಳನ್ನು ಇಲ್ಲಿ ಸಂರಕ್ಷಿಸಲಾಗುತ್ತಿದೆ.


Click it and Unblock the Notifications