ತೌಬಲ್ ಜಿಲ್ಲೆಯ ಪ್ರಮುಖ ತಾಣಗಳಲ್ಲಿ ಒಂದು ಖೊಂಜಮ್. ಬ್ರಿಟೀಷರ ವಿರುದ್ಧ ಮಣಿಪುರಿಗಳು ಕೊನೆಯದಾಗಿ ಹೋರಾಡಿದ ಯುದ್ಧಭೂಮಿ ಇದಾಗಿದೆ. ಏಪ್ರಿಲ್ 1891 ರಲ್ಲಿ ನಡೆದ ಈ ಯುದ್ಧದಲ್ಲಿ ಮಣಿಪುರಿಗಳು ಬ್ರಿಟಿಷ್ ಚೀಫ್ ಕಮಿಷನರ್ ಮತ್ತು ಅವರ ಪಾರ್ಟಿಯ ಇತರ ಸದಸ್ಯರನ್ನು ಹತಗೊಳಿಸಿದರು.
ಮನಿಪುರಿಗಳು ಬ್ರಿಟಿಷರ ವಿರುದ್ಧ ಆಯುಧ ಮತ್ತು ಜನಸಾಮರ್ಥ್ಯದಲ್ಲಿ ಸಮಾನರಲ್ಲವಾದರೂ, ಅವರು ಮನೋಬಲದಿಂದ ಯುದ್ಧ ಮಾಡಿದರು. ಮೇಜರ್ ಜನರಲ್ ಪೊನ ಬ್ರಜಬಷಿ ನೇತೃತ್ವ ವಹಿಸಿದ್ದ ಈ ಯುದ್ಧ ಮಣಿಪುರಿಗಳ ಆತ್ಮವಿಶ್ವಾಸದ ಪ್ರತೀಕವಾಗಿದೆ. ಈ ಯುದ್ದದಲ್ಲಿ ಮಣಿಪುರಿಗಳು ಸೋತಿದ್ದರು.
ಖೊಂಜಮ್ ತೌಬಲ್ ನಿಂದ 10 ಕಿ. ಮೀ ಹಾಗೂ ಇಂಫಾಲ್ ನಿಂದ 32 ಕಿ. ಮೀ ದೂರದಲ್ಲಿದೆ. ಇಲ್ಲಿನ ಸಮರವೀರರ ನೆನಪಿಗೋಸ್ಕರ ಗುಡ್ಡದ ಮೇಲೆ ಒಂದು ಸಣ್ಣ ಯುದ್ದ ಸ್ಮಾರಕವನ್ನು ನಿರ್ಮಿಸಲಾಗಿದೆ. ಇಲ್ಲಿ ನಡೆದ ಯುದ್ಧದ ಸ್ಮರಣೆಗಾಗಿ ಪ್ರತಿವರ್ಷ ಏಪ್ರಿಲ್ 23 ರಂದು ಮಣಿಪುರದಲ್ಲಿ ರಜಾದಿನವಾಗಿ ಘೋಷಣೆ ಮಾಡಲಾಗಿದೆ. ಖೊಂಜಮ್ ಗೆ ರಾಷ್ಟ್ರೀಯ ಹೆದ್ದಾರಿಯಿದ್ದು, ಇಲ್ಲಿ ಒಂದು ಪ್ರವಾಸಿ ಮನೆ ಕೂಡಾ ಇದೆ.