ಶ್ರೀಶೈಲಂ ಮುಖ್ಯ ಪಟ್ಟಣದಿಂದ ಕೆಲವು ಕಿಲೋಮೀಟರ್ ದೂರದಲ್ಲಿ, ಕೃಷ್ಣಾ ನದಿ ಅಡ್ಡಲಾಗಿ ಶ್ರೀಶೈಲಂ ಅಣೆಕಟ್ಟನ್ನು ನಿರ್ಮಾಣ ಮಾಡಲಾಗಿದೆ. ನಲ್ಲಮಲೈ ಬೆಟ್ಟಗಳ ಬಳಿ ಆಳವಾದ ಕಮರಿನಲ್ಲಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಈ ಅಣೆಕಟ್ಟು ಭಾರತದ ಎರಡನೇ ಅತಿದೊಡ್ಡ ಜಲವಿದ್ಯುತ್ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಶ್ರೀಶೈಲಂ ಅಣೆಕಟ್ಟು ಯೋಜನೆಯನ್ನು 1960 ರಲ್ಲಿ ಆರಂಭಿಸಲಾಯಿತು. ಹಾಗೂ ಈ ಯೋಜನೆಯು ಮುಂದಿನ 20 ವರ್ಷಗಳಲ್ಲಿ ಪೂರ್ಣಗೊಡಿತು. ಕೇವಲ ಜಲವಿದ್ಯುತ್ ಯೋಜನೆಗಾಗಿ ಆರಂಭಿಸಲಾದ ಅಣೆಕಟ್ಟು ಯೋಜನೆಯು, ನಂತರದ ದಿನಗಳಲ್ಲಿ 77 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಂತೆ ವಿವಿಧೋದ್ಧೇಶ ಯೋಜನೆಗೆ ಬಳಸಲಾಯಿತು. ಇಂದು, ಈ ಅಣೆಕಟ್ಟಿನಿಂದ 2200 ಚದರ ಕಿಲೋಮೀಟರ್ ನ ಒಳಗಿನ ಪ್ರದೇಶಗಳಿಗೆ ನೀರನ್ನು ಒದಗಿಸಲಾಗುತ್ತಿದೆ.
ಶ್ರೀಶೈಲಂ ಜಲಾಶಯದ ಒಳಹರಿವಿನ ಶೇಖರಣೆಗಾಗಿ ವಿದ್ಯುತ್ ಉತ್ಪಾದನೆಯ ಅವಶ್ಯಕತೆಯಿಲ್ಲ. ಹೀಗಾಗಿ ಬೃಹತ್ ಪ್ರಮಾಣದಲ್ಲಿ ನೀರನ್ನು ಸಂಗ್ರಹಿಸಲಾಗುತ್ತದೆ. ಆದರೆ, ಪ್ರವಾಹದ ಸಮಯದಲ್ಲಿ ಶ್ರೀ ಶೈಲಂ ಅಣೆಕಟ್ಟು ಬಹು ಬೇಗನೆ ತುಂಬುತ್ತದೆ ಹಾಗು ಉಳಿದ ಹೆಚ್ಚಿನ ನೀರು, ಇದಕ್ಕೆ ಹತ್ತಿರದಲ್ಲಿ ಸ್ಥಿತವಾಗಿರುವ ಮತ್ತು ಕಡಿಮೆ ಎತ್ತರದಲ್ಲಿರುವ ನಾಗಾರ್ಜುನ ಸಾಗರ ಅಣೆಕಟ್ಟಿಗೆ ಹರಿಯುತ್ತದೆ. ಪ್ರವಾಹದ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸಲಾಗುವುದಿಲ್ಲ.