ಪ್ರವಾಸಿಗರು ಶ್ರೀರಂಗಪಟ್ಟಣಕ್ಕೆ ಹೋದಾಗ ಇಲ್ಲಿನ ಶ್ರೀರಂಗಪಟ್ಟಣದ ಕೋಟೆಯನ್ನು ನೋಡಲೇಬೇಕು. ಈ ಕೋಟೆಯನ್ನು ಇಲ್ಲಿನ ಜಾಗೀರುದಾರನಾದ ಕೆಂಪೆಗೌಡನು 1537ರಲ್ಲಿ ನಿರ್ಮಿಸಿದನು. ಈ ಕೋಟೆಯು ಕಾವೇರಿನದಿಯ ನಡುವಿನ ದ್ವೀಪದಲ್ಲಿ ಇದೆ. ಇದು ಟಿಪ್ಪು ಸುಲ್ತಾನನ ಕೋಟೆಯೆಂದು ಸಹ ಕರೆಯಲ್ಪಡುತ್ತದೆ. ಇದು ಇಂಡೋ-ಇಸ್ಲಾಮಿಕ್ ವಾಸ್ತು ಶೈಲಿಯನ್ನು ಹೊಂದಿದೆ. ಈ ಕೋಟೆಗ ನಾಲ್ಕು ದ್ವಾರಗಳಿದ್ದು, ಇವುಗಳಿಗೆ ದೆಹಲಿ,ಬೆಂಗಳೂರು, ಮೈಸೂರು ಮತ್ತು ಆನೆ (ಗಜ) ದ್ವಾರಗಳೆಂದು ಕರೆಯುತ್ತಾರೆ. ಕೋಟೆಯ ಸುರಕ್ಷತೆಯ ಸಲುವಾಗಿ ಎರಡೆರಡು ಗೋಡೆಗಳನ್ನು ನಿರ್ಮಿಸಲಾಗಿದೆ.ಕೋಟೆಯ ಪ್ರಮುಖ್ಡ ಆಕರ್ಷಣೆಯೆಂದರೆ ಇಲ್ಲಿನ ಮುಖ್ಯದ್ವಾರ, ಇಲ್ಲಿ ಈ ಕೋಟೆಯ ಸ್ಥಾಪನೆಯ ದಿನಾಂಕವನ್ನು ಪರ್ಷಿಯಾ ಭಾಷೆಯಲ್ಲಿ ಕೆತ್ತಲಾಗಿದೆ. ಇಲ್ಲಿ ಸರ್ ರಾಬರ್ಟ್ ಕೆರ್ ರವರ ಮನಮೋಹಕ ಚಿತ್ರಕಲಾ ವೈಭವವನ್ನು ನೋಡಬಹುದು. ಅವರ ಶ್ರೀರಂಗಪಟ್ಟಣದ ಉಗ್ರಸ್ವರೂಪದಂತಹ ರಚನೆಗಳನ್ನು ಇಲ್ಲಿನ ಗೋಡೆಗಳಲ್ಲಿ ಕಾಣಬಹುದು. ಅಲ್ಲದೆ ಈ ಕೋಟೆಯು ವಿಷ್ಣುವಿನ 24 ವಿವಿಧ ರೂಪಗಳ ಕೆತ್ತನೆಗಳನ್ನು ಹೊಂದಿರುವ ಚತುರ್ವಿಂಶತಿ ಸ್ತಂಭಗಳೆಂದು ಕರೆಯಲಾಗುವ ಕಂಬಗಳನ್ನು ಒಳಗೊಂಡಿದೆ. ಕೋಟೆಯ ಕೆಳಗಿನ ಕೋಣೆಗಳ ಭಾಗವು ಕಾರಾಗೃಹವನ್ನು ಹೊಂದಿದೆ. ಇದನ್ನು ಬ್ರಿಟೀಷ್ ಅಧಿಕಾರಿಗಳು ಬಳಸುತ್ತಿದ್ದರು. ಅಲ್ಲದೆ ಕೋಟೆಯ ಒಳಗೆ ಶ್ರೀರಂಗನಾಥಸ್ವಾಮಿ ದೇವಾಲಯ ಮತ್ತು ಮಸೀದಿ ಸಹಾ ಇದ್ದು ಪ್ರವಾಸಿಗರು ಅವುಗಳನು ವೀಕ್ಷಿಸಬಹುದು.