ಶೃಂಗೇರಿಯ ಸನಿಹ ಹಾದು ಹೋಗುವ ಎಲ್ಲ ಪ್ರವಾಸಿಗರು ನೋಡಬೇಕೆಂದು ಶಿಫಾರಸು ಮಾಡಬಹುದಾದ, ಗಣಪತಿ ದೇವರಿಗೆ ಮುಡಿಪಾದ 'ತೋರಣ ಗಣಪತಿ' ದೇವಸ್ಥಾನವಿದು. ಇಲ್ಲಿನ ಗಣಪತಿಯನ್ನು 'ವರಪ್ರಸಾದಿ' ಹಾಗು 'ಕ್ಷಿಪ್ರ ವರಪ್ರಸಾದಿ' ಎಂಬ ರೂಪದಲ್ಲಿ ಪೂಜಿಸುತ್ತಾರೆ. ಸ್ಥಳೀಯರ ನಂಬಿಕೆಗಳ ಪ್ರಕಾರ ಈ ಗಣಪತಿಯನ್ನು ನಾಲ್ಕನೆ ನರಸಿಂಹ ಭಾರತಿ ಸ್ಥಾಪಿಸಿದುದು.
ಈ ದೇವಸ್ಥಾನದ ಪ್ರಮುಖ ಆಕರ್ಷಣೆ ವೃದ್ದ ನರಸಿಂಹ ಭಾರತಿ ಸ್ವಾಮಿಯ ಪಾದುಕೆ. ಈ ದೇವಸ್ಥಾನದಲ್ಲಿ ತೆಂಗಿನಕಾಯಿ, ಸಕ್ಕರೆ ಮೋದಕ ಮತ್ತು ಬೆಲ್ಲವನ್ನು ಪ್ರಸಾದವಾಗಿ ಭಕ್ತರಿಗೆ ನೀಡಲಾಗುತ್ತದೆ. ಯಾತ್ರಾರ್ಥಿಗಳು ಇಲ್ಲಿ ಮಂಗಳವಾರದಂದು ಮತ್ತು ಚತುರ್ಥಿ ಯಂದು ನಡೆಯುವ ಪ್ರಾರ್ಥನೆ ಮತ್ತು ಇತರೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬಹುದು.