ಸೇವಾಗ್ರಾಮವು ಪ್ರಮುಖ ಯಾತ್ರಾ ಸ್ಥಳವಾಗಲು ಪ್ರಧಾನ ಕಾರಣವೆ ಇಲ್ಲಿರುವ ಸೇವಾಗ್ರಾಮ ಆಶ್ರಮವಾಗಿದೆ. ಏಕೆಂದರೆ ಈ ಆಶ್ರಮದಲ್ಲಿ ಗಾಂಧೀಜಿಯವರು ಇಲ್ಲಿ 1936 ರಿಂದ 1948 ರವರೆಗೆ 13 ವರ್ಷಗಳ ಕಾಲ ಇಲ್ಲಿ ನೆಲೆಸಿದ್ದರು.
ನಂಬಿಕೆಗಳ ಪ್ರಕಾರ, ಗಾಂಧೀಜಿಯವರು 1930 ರಲ್ಲಿ ಸಾಬರಮತಿ ಆಶ್ರಮದಿಂದ ದಂಡಿಯವರೆಗೆ ಪಾದಯಾತ್ರೆ ಕೈಗೊಂಡಾಗ, ಗಾಂಧೀಜಿಯವರು ಭಾರತ ಸ್ವಾತಂತ್ರ್ಯಗಳಿಸದ ಹೊರತು ತಾನು ಸಾಬರಮತಿಗೆ ಕಾಲಿಡಲಾರೆ ಎಂದು ಪ್ರತಿಜ್ಞೆ ಸ್ವೀಕರಿಸಿದ್ದರು. ಆದರೆ ಆಗ ಭಾರತ ಸ್ವಾತಂತ್ರ್ಯಗಳಿಸಲಿಲ್ಲ ಮತ್ತು ಗಾಂಧೀಜಿಯವರನ್ನು ಸೆರೆವಾಸದಲ್ಲಿಡಲಾಯಿತು.
ಸೆರೆಯಿಂದ ಬಿಡುಗಡೆಯಾದ ನಂತರ ಗಾಂಧೀಜಿಯವರು ಸೇವಾಗ್ರಾಮದಲ್ಲಿ ನೆಲೆಸಲು ನಿರ್ಧರಿಸಿದರು. ಹಾಗಾಗಿ ಈ ಆಶ್ರಮ ನಿರ್ಮಾಣವಾಯಿತು.
ಈ ಆಶ್ರಮದಲ್ಲಿ ಹಲವು ವಿಭಾಗಗಳಿವೆ. ಇವುಗಳಲ್ಲಿ ಗಾಂಧೀಜಿ ಮತ್ತು ಕಸ್ತೂರ್ ಬಾ ಅವರು ಬಳಸಿದ ಆದಿ ನಿವಾಸ ಮತ್ತು ಪ್ರಾರ್ಥನಾ ಅಂಗಣ, ಬಾ ಕುಟಿ, ಬಾಪು ಕುಟಿ ಮತ್ತು ಆಖ್ರಿ ನಿವಾಸಗಳು ಕೆಲವು ಹೆಸರಿಸ ಬೇಕಾದಂತಹ ಕೋಣೆಗಳಾಗಿವೆ. ಅಲ್ಲದೆ ಬಾಪುರವರ ಅಡುಗೆಮನೆ, ಆದ್ಯ ಆದಿ ನಿವಾಸ, ಪರ್ಚುರೆ ಕುಟಿ, ಮಹಾದೇವ್ ಕುಟಿ, ಕಿಶೋರ್ ನಿವಾಸ್, ರುಸ್ತಂ ಭವನ್ ಮತ್ತು ಯಾತ್ರಿ ನಿವಾಸ್ ಇಲ್ಲಿರುವ ಇನ್ನಿತರ ಕೋಣೆಗಳಾಗಿವೆ.
ಯಾತ್ರಿ ನಿವಾಸವನ್ನು ಯಾತ್ರಾರ್ಥಿಗಳಿಗೆ ವಸತಿ ಒದಗಿಸುವ ಉದ್ದೇಶದಿಂದ ಸರ್ಕಾರವು 1982 ರಲ್ಲಿ ನಿರ್ಮಿಸಿತು.