ಈ ಪ್ರಸಿದ್ದ ಶಿವ ದೇವಾಲಯವು ಸಿಯೋನಿಯ ಕಾತಾಲ್ಬೋದಿ ಎನ್ನುವ ಹಳ್ಳಿಯಲ್ಲಿದೆ, ಇದು ಸಿಯೋನಿ ಜಿಲ್ಲೆಯಿಂದ ಹದಿನೇಳು ಕಿಲೋಮೀಟರ್ ದೂರದಲ್ಲಿದೆ. ಈ ಪ್ರಸಿದ್ದ ಶಿವ ದೇವಾಲಯವನ್ನು 2003 ರಲ್ಲಿ ಖ್ಯಾತ ತತ್ವಜ್ಞಾನಿ ಆದಿ ಶಂಕರಾಚಾರ್ಯರ ನೆನಪಿಗಾಗಿ ಕಟ್ಟಲಾಗಿದೆ. ಸುಂದರವಾದ ಈ ದೇವಾಲಯವನ್ನು ನೋಡುವುದೇ ಒಂದು ಅಂದ. ಭಕ್ತಾದಿಗಳು ಈ ದೇವಾಲಯದ ಮೇಲೆ ಭಕ್ತಿಭಾವ ಹೊಂದಿದ್ದಾರೆ. ಬರೀ ಸ್ಥಳೀಯರಿಗೆ ಮಾತ್ರವಲ್ಲ ಪ್ರವಾಸಿಗರ ವಲಯದಲ್ಲೂ ಈ ದೇವಾಲಯವು ಪ್ರಸಿದ್ದ. ಈ ದೇವಾಲಯವು ಆರಂಭವಾದಾಗಿನಿಂದ ಪ್ರವಾಸಿಗರಿಗೆ ಇದೊಂದು ಪುಣ್ಯ ಕ್ಷೇತ್ರವಾಗಿದೆ. ಈ ದೇವಾಲಯದ ಹೊರಾಂಗಣ ಮತ್ತು ದೇವಾಲಯದೊಳಗಿನ ಧಾರ್ಮಿಕ ವಾತಾವರಣದಿಂದ ಭೇಟಿ ನೀಡುವವರಿಗೆ ಶಾಂತಿ ಮತ್ತು ನೆಮ್ಮದಿ ನೀಡುತ್ತದೆ.