ಪ್ರಸಿದ್ದ ಮಹಾಕಾಳೇಶ್ವರ ದೇವಾಲಯವು ದಿಘೋರಿ ಎನ್ನುವ ಹಳ್ಳಿಯಲ್ಲಿದೆ. ಈ ಚಿಕ್ಕ ಹಳ್ಳಿ ಸಿಯೋನಿಯಿಂದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿದೆ. ಮಹಾಕಾಳೇಶ್ವರ ದೇವಾಲಯವು ಕ್ರಿ,ಪೂ ಎಂಟನೇ ಶತಮಾನದಲ್ಲಿದ್ದ ಭಾರತದ ಖ್ಯಾತ ತತ್ವಜ್ಞಾನಿ ಆದಿ ಶಂಕಾರಾಚಾರ್ಯರು ಸ್ಥಾಪಿಸಿದರು ಎನ್ನುತ್ತದೆ ಇತಿಹಾಸ. ಈ ಪ್ರಸಿದ್ದ ಕಾರ್ಣಿಕ ದೇವಾಲಯವು ಶಿವನ ದೇವಾಲಯವಾಗಿದೆ. ಈ ಕ್ಷೇತ್ರವು ಹಿಂದೂಗಳಿಗೆ ಧಾರ್ಮಿಕ ಭಾವನೆಯ ಸ್ಥಳವಾಗಿದ್ದು, ಜಾತಿಮತ ಭೇದವಿಲ್ಲದೇ ನೂರಾರು ಭಕ್ತರು ಇಲ್ಲಿಗೆ ಭೇಟಿ ನೀಡಿ ಶಿವ ದೇವರ ಆಶೀರ್ವಾದ ಪಡೆಯುತ್ತಾರೆ. ಸಾರ್ವಜನಿಕ ಸಾರಿಗೆಯ ಮೂಲಕ ಯಾವುದೇ ತೊಂದರೆಯಿಲ್ಲದೆ ಈ ದೇವಾಲಯಕ್ಕೆ ಪ್ರವಾಸಿಗರು ಭೇಟಿ ನೀಡಬಹುದು.