ಜಡ ತೀರ್ಥಂ ಧನುಷ್ಕೋಡಿ ಹೋಗುವ ದಾರಿಯಲ್ಲಿ ರಾಮೇಶ್ವರದವರೆಗೆ 3.5 ಕಿಮೀ ದೂರದಲ್ಲಿದೆ. ಧನುಷ್ಕೋಡಿಯಲ್ಲಿ ಪವಿತ್ರ ಸ್ನಾನ ಮಾಡುಲು ಹೋಗುವ ಅನೇಕ ಪ್ರವಾಸಿಗರು ಹಾಗೆಯೇ ಜಡ ತೀರ್ಥಂ ನಲ್ಲಿಯೂ ಪವಿತ್ರ ಸ್ನಾನ ಮಾಡುತ್ತಾರೆ.
ಈ ತೀರ್ಥಂ ಮತ್ತೆ ಶ್ರೀ ರಾಮನ ದಂತಕಥೆಗಳ ಸಂಬಂಧಿಸಿದೆ. ಇದು ರಾಮ, ರಾವಣ ಕೊಂದು ತನ್ನ ಪತ್ನಿ ಸೀತೆ ಉಳಿಸಿಕೊಂಡ ನಂತರ ಅಯೋಧ್ಯೆಗೆ ಹೋಗುವ ದಾರಿಯಲ್ಲಿ, ಈ ಸ್ಥಳದಲ್ಲಿ ತಂಗಿದ್ದನು ಎಂದು ನಂಬಲಾಗಿದೆ. ರಾಮನು ಇಲ್ಲಿ ಒಂದು ಲಿಂಗವನ್ನು ತಯಾರಿಸಿ ಅದನ್ನು ಪೂಜಿಸಿದ್ದನು. ಲಿಂಗವನ್ನು ಶ್ರೀ ರಾಮಲಿಂಗ ಎಂದೇ ಕರೆಯಲಾಗುತ್ತದೆ. ಶ್ರೀ ರಾಮನೂ ಕೂಡ ಬ್ರಾಹ್ಮಣನನ್ನು ಕೊಂದಿದ್ದ ಪಾಪದ್ಂದ ತನ್ನನ್ನು ಬಿಡುಗಡೆ ಗೊಳಿಸಿಕೊಳ್ಳುವ ಸಲುವಾಗಿ ನೀರಿನಲ್ಲಿ ತನ್ನ 'ಜಡ' ಅಥವಾ ಕೂದಲನ್ನು ತೊಳೆದುಕೊಂಡನು.
ಪಾಪವನ್ನು ತೊಳೆದುಕೊಂಡ ಆನಂತರವಷ್ಟೇ ರಾಮನು ಲಿಂಗದ ಆರಾಧನೆಯನ್ನು ಆರಂಭಿಸಿದನು. ಈ ದೇವಾಲಯವು ರಾಮೇಶ್ವರದ ಇತರ ದೇವಾಲಯಗಳಿಗೆ ಹೋಲಿಸಿದರೆ ಬಹಳ ಚಿಕ್ಕದಾಗಿದೆ. ವಾಸ್ತವವಾಗಿ, ಈ ದೇವಾಲಯವು ಮತ್ತೊಂದು ತೀರ್ಥಂ, ಕಾವೇರಿ ತೀರ್ಥಂನ ಆವರಣದಲ್ಲಿಯೇ ಕಟ್ಟಲಾಗಿದೆ. ಪಕ್ಷಿಗಳ ರಾಜ ಜಟಾಯು ರಾವಣನಿಂದ ತನ್ನ ರೆಕ್ಕೆಗಳನ್ನು ಕಳೆದುಕೊಂಡ ನಂತರ ಈ ಸ್ಥಳದಲ್ಲಿ ಜೀವ ಕಳೆದುಕೊಂಡನು ಎಂದು ಕೆಲವರು ನಂಬುತ್ತಾರೆ.