ಜನಪ್ರಿಯವಾಗಿ ರಾಮ ಸೇತು ಅಥವಾ ರಾಮನ ಸೇತುವೆ ಎಂದು ಆಡಂ ಸೇತುವೆಯನ್ನು ಗುರುತಿಸುತ್ತಾರೆ. ರಾವಣನಿಂದ ಅಪಹರಿಸಲ್ಪಟ್ಟ ಸೀತೆಯನ್ನು ಕಾಪಾಡಲು ರಾಮ ವಾನರ ಅಥವಾ ಮಂಗಗಳ ಸೇನೆ ಸಹಾಯದಿಂದ ಇಲ್ಲಿ ಸೇತುವೆ ನಿರ್ಮಿಸಿದ. ರಾಮಾಯಣದಲ್ಲಿ ಈ ಸೇತುವೆಯನ್ನು ಸೇತುಬಂಧಂ ಎಂದು ಕರೆಯಲಾಗುತ್ತದೆ.
ಸೇತುವೆ ವಾಸ್ತವವಾಗಿ ಸುಣ್ಣದ ಕಲ್ಲಿನಿಂದ ತಯಾರಿಸಿದ ಒಂದು ಮಾರ್ಗವಾಗಿದ್ದು ಆಗ್ನೇಯ ಕರಾವಳಿಯಲ್ಲಿರುವ ತಮಿಳುನಾಡಿನ ಪಂಬನ್ ದ್ವೀಪ ಮತ್ತು ವಾಯುವ್ಯ ಕರಾವಳಿಯ ಶ್ರೀಲಂಕಾದ ಮನ್ನಾರ್ ದ್ವೀಪದ ನಡುವೆ ವಿಸ್ತರಣೆಯಾಗಿದೆ. ಭೂಗರ್ಭಶಾಸ್ತ್ರಜ್ಞರು ಸೇತುವೆಯು ವಾಸ್ತವವಾಗಿ ಹಿಂದೆ ಭಾರತ ಮತ್ತು ಶ್ರೀಲಂಕಾ ನಡುವೆ ಸಂಪರ್ಕ ಕಲ್ಪಿಸುವ ಒಂದು ನಡಿಗೆ ಮಾರ್ಗವಾಗಿತ್ತು ಎಂದು ಸಾಬೀತುಪಡಿಸಿದ್ದಾರೆ. ಈಗ ಈ ಸಮುದ್ರ ಎರಡು ದೇಶಗಳನ್ನು ಬೇರ್ಪಡಿಸುವ ಸಮುದ್ರ ಸೇತುವೆ ಸೇತುಸಮುದ್ರಂ ಎಂದು ಕರೆಯಲಾಗುತ್ತದೆ.
ಈ ಸೇತುವೆಯ ಬಗ್ಗೆ ಕ್ರಿಶ್ಚಿಯನ್ ಪುರಾಣದಲ್ಲಿ ಕೂಡ ಉಲ್ಲೇಖವಿದ್ದು, ಆಡಮ್ ಈ ಸೇತುವೆಯನ್ನು ಪರ್ವತವನ್ನು ( ಶ್ರೀಲಂಕಾದಲ್ಲಿ ನೆಲೆಗೊಂಡಿರುವ ಆಡಂ ಶಿಖರ)ತಲುಪಲು ದಾಟಿದ್ದನು. ಆ ಪರ್ವತ ಮೇಲೆ ಆತ ಒಂದೇ ಕಾಲಿನ ಮೇಲೆ ನಿಂತು ಸಾವಿರ ವರ್ಷಗಳ ಕಾಲ ತಪಸ್ಸನ್ನಾಚರಿಸಿದ್ದನು. ಆದ್ದರಿಂದ ಈ ಸೇತುವೆಯನ್ನು ಹೆಸರು ಆಡಮ್ ಸೇತುವೆ ಎನ್ನಲಾಗುತ್ತದೆ.


Click it and Unblock the Notifications