ಹಜರತ್ ಪೀರ್ ಫತೆ ಉಲ್ಲಾಹ ಷಾ ಬಾಬಾ, ಇದು ಧಾರ್ ಪ್ರವಾಸೋದ್ಯಮದ ಕೊಡುಗೆಯಾಗಿದೆ. ಇದು ರಾಯಸೇನ್ ಪ್ರದೇಶದ ಅತ್ಯಂತ ಮಹತ್ವದ ಸ್ಥಳವಾಗಿದೆ. ಈ ಪುಣ್ಯ ಕ್ಷೇತ್ರವು ದೇಶಾದ್ಯಂತ ಪ್ರಸಿದ್ಧಿಯನ್ನು ಪಡೆದಿದ್ದು, ತನ್ನ ಪವಿತ್ರತೆಗಾಗಿ ಹೆಸರುವಾಸಿಯಾಗಿದೆ. ಮುಸ್ಲಿಮ್ ಪವಿತ್ರ ಸಂತರಾದ ಹಜರತ ಪೀರ್ ಫತೆ ಉಲ್ಲಾಹ ಷಾ ಬಾಬಾ ರ ಆಶಿರ್ವಾದಕ್ಕಾಗಿ ಪ್ರತಿದಿನವೂ ಈ ಪವಿತ್ರ ಸ್ಥಳಕ್ಕೆ ಸಾವಿರಾರು ಜನರು ಭೇಟಿ ನೀಡುತ್ತಾರೆ.
ಈ ಪುಣ್ಯಕ್ಷೇತ್ರದಲ್ಲಿ ಭಕ್ತರು ಏನಾದರೂ ಪೂರ್ಣ ನಂಬಿಕೆ ಮತ್ತು ಪ್ರಾಮಾಣಿಕತೆಯಿಂದ ಹರಕೆಯನ್ನು ಅಥವಾ ಮನಸ್ಸಿನ ಆಸೆ ನೇರವೇರಿಸುವಂತೆ ಬೇಡಿಕೊಂಡರೆ, ಅದು ಖಂಡಿತವಾಗಿಯೂ ನೇರವೇರುತ್ತದೆ ಮತ್ತು ಜನರ ಜೀವನದಲ್ಲಿ ಎಲ್ಲ ರೀತಿಯಿಂದಲೂ ಒಳ್ಳೆಯದು ಆಗುತ್ತದೆ ಎಂಬ ಭಾವನೆ ಇದೆ. ಹಜರತ್ ಪೀರ ಫತೆಉಲ್ಲಾಹ ಷಾ ಬಾಬಾ ಪುಣ್ಯ ಸ್ಥಳಕ್ಕೆ ಎಲ್ಲ ಧರ್ಮ ಮತ್ತು ಪಂಥದ ಜನರು ಭೇಟಿ ನೀಡಲು ಅವಕಾಶ ಇದೆ. ಇಲ್ಲಿ ಯಾವುದೇ ರೀತಿಯ ಪಕ್ಷಪಾತದ ತಾರತಮ್ಯವಿಲ್ಲ. ಇದಕ್ಕೆ ಕಾರಣ ಏನೆಂದರೆ ಈ ಪುಣ್ಯ ಸ್ಥಳವನ್ನು ಭಾರತದಲ್ಲಿರುವ ಧಾರ್ಮಿಕ ಭಾವೈಕ್ಯತೆಯನ್ನು ಹೊಂದಿದ ಪ್ರಮುಖ ಸ್ಥಳಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.