ಹನುಮಾನ್ ಭಗವಂತನಿಗೆ ಸಮರ್ಪಿಸಲಾಗಿರುವ ಪವಿತ್ರ ಮಂದಿರ ಇದಾಗಿದೆ. ಲಕ್ಷಾಂತರ ಮಂದಿ ಈ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ಉತ್ತರ ಭಾರತದಲ್ಲಿ ಅತೀ ಹೆಚ್ಚು ಭೇಟಿ ನೀಡಲ್ಪಡುವ ಎರಡನೇ ಮಂದಿರ ಮಹಾವೀರ ಮಂದಿರ. ದೇಶವಿಭಜನೆ ವೇಳೆ ಬೃಹತ್ ಸಂಖ್ಯೆಯ ಹಿಂದೂಗಳು ಪಟ್ನಾಗೆ ಹೋದಾಗ 1947ರಲ್ಲಿ ಈ ಮಂದಿರವು ಪತ್ತೆಯಾಗಿತ್ತು. ಇಲ್ಲಿರುವ ಸಂಕಟಮೋಚನ ಮೂರ್ತಿಯು ಭಕ್ತರ ಹೃದಯದಲ್ಲಿ ಮನೆ ಮಾಡಿದೆ. ರಾಮನವಮಿ ವೇಳೆ ಭಕ್ತರ ಸಾಗರವೇ ಇಲ್ಲಿಗೆ ಹರಿದುಬರುತ್ತದೆ.