ಭಗವಾನ್ ಗಣೇಶನ ನೆಲೆಯಾದ ಈ ಪ್ರಸಿದ್ಧ ಹಿಂದೂ ದೇವಾಲಯಕ್ಕೆ 1900 ಇಸವಿಗಿಂತ ಮೊದಲಿನಿಂದಲೂ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳು ಭೇಟಿ ನೀಡುತ್ತಿದ್ದಾರೆ. ಕೇವಲ ಇಟ್ಟಿಗೆಯಿಂದ ಕೆಲವೆ ಅಡಿ ವಿಸ್ತಾರದಲ್ಲಿ ನಿರ್ಮಿಸಲಾಗಿದ್ದ ಈ ದೇವಾಲಯ, ಇಂದು ಮುಂಬೈನ ಅತಿ ಶ್ರೀಮಂತ ದೇವಾಲಯವೆನಿಸಿದ್ದು, ಹಲವರ ಹೃದಯದಲ್ಲಿ/ಮನಸ್ಸಿನಲ್ಲಿ ನೆಲೆಯಾಗಿದೆ. ವಿಶೇಷ ಸೂಚನೆಯೆಂದರೆ, ನೀವು ಸರಿಯಾದ ಸಮಯಕ್ಕೆ, ಸರಿಯಾದ ದಿನ ಇಲ್ಲಿಗೆ ಭೇಟಿ ನೀಡದಿದ್ದರೆ ಇಲ್ಲಿನ ಸಾಲುಗಟ್ಟಿದ ಜನಸಂದಣಿಯಲ್ಲಿ ದಿನವಿಡಿ ನಿಲ್ಲಬೇಕಾದೀತು! ಅಷ್ಟು ಭಾರಿ ಮೊತ್ತದ ಜನ ಸಾಗರ ಈ ದೇವಾಲಯದ ಮುಂದೆ ಪ್ರತಿ ದಿನ ಇರುತ್ತದೆ. ಇಲ್ಲಿನ ವಾಸ್ತು ಶೈಲಿ ಹಾಗೂ ಯಾತ್ರಾರ್ಥಿಗಳ ನಿರ್ವಹಣೆ ಅಚ್ಚುಕಟ್ಟಾಗಿದೆ.
ಸಿದ್ಧಿ ವಿನಾಯಕ ದೇವಸ್ಥಾನವು, ವರ್ಲಿ ಸಮುದ್ರಾಭಿಮುಖವಾಗಿ ನೆಲೆಸಿದ್ದು, ಹಾಜಿ ಅಲಿ ಜ್ಯೂಸ್ ಸೆಂಟರ್ ನಂತಹ ಮುಂಬೈ ನಗರದ ಹಲವಾರು ಆಕರ್ಷಣಾ ಸ್ಥಳಗಳಿಗೆ ಅತ್ಯಂತ ಹತ್ತಿರದಲ್ಲಿದೆ.


Click it and Unblock the Notifications