ಕುಂದಾಪುರವು ಕುಂದಾಪುರ ತಾಲ್ಲೂಕಿನ ತಾಲ್ಲೂಕು ಕೇಂದ್ರವಾಗಿದ್ದು ಮರವಂತೆಯ ನೋಡಲೇಬೇಕಾದ ಸ್ಥಳಗಳಲ್ಲಿ ಒಂದಾಗಿದೆ. ಇದನ್ನು ಸೂರ್ಯನ ಊರು ಎಂದು ಸಹಾ ಕರೆಯುತ್ತಾರೆ. ಈ ಊರಿಗೆ ಇಲ್ಲಿನ ಕುಂದೇಶ್ವರ ದೇವಾಲಯದಿಂದಾಗಿ ಕುಂದಾಪುರ ಎಂಬ ಹೆಸರು ಬಂದಿತು. ನಂಬಿಕೆಗಳ ಪ್ರಕಾರ ಪೋರ್ಚುಗೀಸರ ಮತ್ತು ಜರ್ಮನ್ ಮಿಷನರಿಗಳು ಈ ಊರನ್ನು ಕಟ್ಟಿದರಂತೆ. ಆದರು ಈ ಊರನ್ನು ಟಿಪ್ಪು ಸುಲ್ತಾನನ ಮರಣದ ನಂತರ ಬ್ರಿಟೀಷರು ಆಳಿದರಂತೆ. ಅಲ್ಲದೆ ಈ ಊರು ಬೈಂದೂರಿನ ರಾಜರ ಕಾಲದಲ್ಲಿ ಪ್ರಮುಖ ಬಂದರು ಆಗಿತ್ತಂತೆ. ಈ ಊರು ತನ್ನ ಮೂರು ಕಡೆಯಲ್ಲಿ ನೀರಿನಿಂದ ಆವೃತ್ತವಾಗಿದೆ. ಒಂದೆಡೆ ಉತ್ತರದಲ್ಲಿ ಪಂಚಾಂಗವಲ್ಲಿ ನದಿಯಿದ್ದರೆ, ಪಶ್ಚಿಮಕ್ಕೆ ಕೋಡಿ ಹಿನ್ನೀರು ಪ್ರದೇಶ ಮತ್ತು ಅರಬ್ಬೀ ಸಮುದ್ರವಿದೆ. ಹಾಗಾಗಿ ಈ ಊರಿಗೆ ಕೆಲವು ಸ್ಥಳೀಯ ದೋಣಿಗಳನ್ನು ಹೊರತುಪಡಿಸಿ ಬೇರೆ ಸಾರಿಗೆ ಸೌಲಭ್ಯವಿಲ್ಲ. ಪ್ರವಾಸಿಗರು ಇಲ್ಲಿಗೆ ಸಮೀಪದ ಕೋಡಿ ಮತ್ತು ಗಂಗೊಳ್ಳಿ ಗ್ರಾಮಗಳ ಮೂಲಕ ದೋಣಿಗಳಲ್ಲಿ ಕುಂದಾಪುರ ತಲುಪಬಹುದು.