ನೀವು ಚಾರಣ ಪ್ರಿಯರಾಗಿದ್ದರೆ, ಇಲ್ಲಿ ಬಂದ ಮೇಲೆ ರಾಜಮಾಚಿಗೆ ಹೋಗದೇ ಹೋದರೆ ನಿಮ್ಮ ಪ್ರವಾಸ ಅಪೂರ್ಣ. ಇದು ಮಹಾರಾಷ್ಟ್ರದಲ್ಲೇ ಅತ್ಯಂತ ಜನಪ್ರಿಯ ಚಾರಣ ತಾಣ. ನೀವು ಪ್ರಬುದ್ಧ ಚಾರಣಿಗರೇ ಆಗಿರಿ ಅಥವಾ ಹೊಸದಾಗಿ ಚಾರಣ ಮಾಡುವವರೇ ಆಗಿರಲಿ, ಏನೇ ಆದರೂ ಸಹ್ಯಾದ್ರಿ ಶ್ರೇಣಿ ಮತ್ತು ಪಶ್ಚಿಮ ಘಟ್ಟ ಪ್ರದೇಶವು ಚಾರಣಕ್ಕೆ ಅತ್ಯಂತ ಸೂಕ್ತವಾದ ಸ್ಥಳ. ಯಾಕೆಂದರೆ ಎಲ್ಲ ರೀತಿಯ ಚಾರಣ ದಾರಿಯೂ ಇಲ್ಲಿದೆ.
ಹವ್ಯಾಸಿ ಚಾರಣಿಗರು ರಾಜಮಾಚಿಯಿಂದ ಖಂಡಾಲಾ ದಾರಿಯಲ್ಲಿ, ತುಂಗರ್ಲಿ ಕೆರೆಯಿಂದ ಲೋಣಾವಲ ದಾರಿಯಲ್ಲಿ ಹೋಗಬಹುದು. ಇದು ಸ್ವಲ್ಪ ಕಷ್ಟಕರ ಅನ್ನಿಸಬಹುದು. ಇನ್ನು ರಾಜಮಾಚಿಯಿಂದ ಕೊನದಾನ ಗುಹೆಗಳ ಮೂಲಕ ಅಥವಾ ಸುಂದರವಾದ ಉಲ್ಲಾಸ್ ನದಿಯ ಪಕ್ಕದಲ್ಲಿ ನಡೆದು ಪ್ರಯಾಣ ಮಾಡಬಹುದು.
ಚಾರಣದಲ್ಲಿ ನಿಮಗೆ ಎದುರಾಗುವುದು ಸುಂದರವಾದ ಪರಿಸರ. ನಿಮ್ಮ ನೆನಪಿನ ಆಳದಲ್ಲಿ ಈ ಚಾರಣದ ಅನುಭವ ಖಂಡಿತವಾಗಿಯೂ ನಿರಂತರವಾಗಿರುತ್ತದೆ. ಕೋಟೆಯನ್ನು ಪ್ರವೇಶಿಸುವಾಗ ನೀವು ಬೃಹತ್ ಗಾತ್ರದ ಕಲ್ಲುಗಳನ್ನು ಏರಬೇಕಾಗುತ್ತದೆ. ಇದಂತೂ ಜೀವನದಲ್ಲಿ ಮರೆಯಲಾರದ ಅನುಭವ.