ಕೊಟ್ಟಾಯಂನಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಚಂಗನಾಚೆರೆಯಲ್ಲಿ ಸುಬ್ರಹ್ಮಣ್ಯ ದೇವಾಲಯವಿದೆ. ಕೇರಳಾದಲ್ಲಿರುವ ಕೆಲವೇ ಕೆಲವು ಸುಬ್ರಹ್ಮಣ್ಯ ದೇವಾಲಯಗಳಲ್ಲಿ ಇದೂ ಒಂದು. ಕ್ರಿ.ಶ.733 ರಲ್ಲಿ ಈ ದೇವಾಲಯ ನಿರ್ಮಿಸಿರುವ ಇತಿಹಾಸವಿದೆ. ಯಾವುದೇ ಕುಲ-ಜಾತಿ, ಧರ್ಮ ಹಾಗೂ ಬಣ್ಣದ ಅಡೆತಡೆ ಇಲ್ಲದೆ ಎಲ್ಲರಿಗೂ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟ ಭಾರತದ ಮೊದಲ ದೇವಾಲಯ ಎಂಬ ಕೀರ್ತಿ ಇದಕ್ಕಿದೆ. ದೇವಾಲಯದ ಒಳಭಾಗದಲ್ಲಿರುವ ವಿಗ್ರಹ ಸುಮಾರು 6 ಅಡಿ ಎತ್ತರವಿದೆ. ಅದಕ್ಕಿಂತಲೂ ಹೆಚ್ಚಾಗಿ ಸುಬ್ರಹ್ಮಣ್ಯ ದೇವರು ಕೈಯಲ್ಲಿ ಹಿಡಿದಿರುವ 'ವೇಲ್' ಅಥವಾ ಈಟಿ ಆಕಾಶದ ಕಡೆಗೆ ತೋರಿಸುವ ಬದಲು ಭೂಮಿಯ ಕಡೆಗೆ ಗುರಿಯನ್ನು ಹೊಂದಿದೆ.
ಈ ದೇವಾಲಯದಲ್ಲಿ ವರ್ಷಕ್ಕೊಮ್ಮೆ 'ಪಲ್ಲಿಮಟ್ಟ ಉತ್ಸವ' ನಡೆಯುತ್ತದೆ. ನವೆಂಬರ್ ಹಾಗೂ ಡಿಸೆಂಬರ್ ನ ಧನುರ್ ಮಾಸದಲ್ಲಿ ಸುಮಾರು 10 ದಿನಗಳ ಕಾಲ ಈ ಉತ್ಸವ ನಡೆಯುತ್ತದೆ. ಚಕ್ಕಿಯಾರ್ಕೂಟ ಇಲ್ಲಿನ ಪ್ರಮುಖ ಆಕರ್ಷಣೆ. 'ಉರಜ್ಮಾ' ದೇವಾಸಂ ಮಂಡಳಿಯ ವತಿಯಿಂದ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ನಿರ್ವಹಣೆ ನಡೆಯುತ್ತದೆ. ಅತ್ಯಂತ ಪುರಾತನ ದೇವಾಲಯವಾಗಿರುವುದರಿಂದ ಇಲ್ಲಿಗೆ ಒಮ್ಮೆ ಭೇಟಿ ನೀಡಬಹುದು.


Click it and Unblock the Notifications