ದ್ವಾರಕಾಧೀಶ ಎಂದರೆ ದ್ವಾರಕಾದ ದೊರೆ ಶ್ರೀಕೃಷ್ಣ ಪರಮಾತ್ಮ ಎಂದರ್ಥ. ಅದಕ್ಕಾಗಿ ಮಂದಿರ ಅವನಿಗೆ ಸಮರ್ಪಿಸಲಾಗಿದೆ. ಇದು ಕಾನ್ಪುರದ ಕಮಲಾ ಗೋಪುರದ ಬಳಿಯಿದೆ. ಹಿಂದೂ ಪಂಚಾಂಗದ ಪ್ರಕಾರ, ಅನೇಕ ಹಬ್ಬಗಳು ಜುಲೈ, ಆಗಸ್ಟ್ ನಲ್ಲಿ ಬರುವ ಶ್ರಾವಣ ಮಾಸದಲ್ಲಿ ಬರುತ್ತವೆ. ಉತ್ತರ ಭಾರತದ ಜನರು ಈ ಮಾಸವನ್ನು ಅತ್ಯಂತ ಪವಿತ್ರ ಹಾಗು ವಿಶೇಷವೆಂದು ಪರಿಗಣಿಸುತ್ತಾರೆ. ರಾಧಾಕೃಷ್ಣರನ್ನು ಈ ಸಂದರ್ಭದಲ್ಲಿ ಅತ್ಯಂತ ವಿಜೃಂಭಣೆಯಿಂದ ಪೂಜಿಸಲಾಗುತ್ತದೆ.
ಎರಡು ಪ್ರತಿಮೆಗಳಿಗೆ ಬಣ್ಣಬಣ್ಣದ ವಸ್ತ್ರಗಳನ್ನು ತೊಡಿಸಿ, ಹಗ್ಗದಿಂದ ತಯಾರಿಸಿದ ಉಯ್ಯಾಲೆ ಮೇಲೆ ಕೂಡಿಸಿ, ಸಂತೋಷವಾಗಿ ಹಾಡುಗಳನ್ನು ಹೇಳುತ್ತಾ, ಉಯ್ಯಾಲೆಯನ್ನು ತೂಗುತ್ತ ಸಡಗರದಿಂದ ಈ ಹಬ್ಬವನ್ನು ಆಚರಿಸುತ್ತಾರೆ.
ಕಾನ್ಪುರದಲ್ಲಿರುವ ದ್ವಾರಕಾಧೀಶ ಮಂದಿರ ಝೂಲಾ ಅಂದರೆ ಉಯ್ಯಾಲೆಗೆ ಪ್ರಸಿದ್ಧವಾಗಿದೆ. ಉಯ್ಯಾಲೆ ಮೇಲೆ ಕೂರಿಸಿರುವ ಶ್ರೀಕೃಷ್ಣ ರಾಧೆಯ ಜೋಡಿಯನ್ನು ತೂಗುವ ಧಾರ್ಮಿಕವಿಧಿಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ.