ತಮಿಳುನಾಡಿನಲ್ಲಿರುವ 9 ನವಗ್ರಹ ದೇವಸ್ಥಾನಗಳಲ್ಲಿ ಅಗ್ನೀಶ್ವರರ್ ದೇವಸ್ಥಾನವು 6 ನೇ ನವಗ್ರಹ ಸ್ಥಳಂ. ಈ ದೇವಸ್ಥಾನದಲ್ಲಿರುವ ಶಿವನನ್ನು ಅಗ್ನೀಶ್ವರರ್ ಎಂದು ಕರೆದರೆ, ದೇವಿ ಪಾರ್ವತಿಯನ್ನು ಕರ್ಪಾಗಂಬಲ್ ಎನ್ನುತ್ತಾರೆ. ಜನ್ಮ ಕುಂಡಲಿಯಲ್ಲಿರುವ ದೋಷಗಳ ನಿವಾರಣೆಗಾಗಿ ಜನರು ಈ ದೇವಸ್ಥಾನದಲ್ಲಿ ಶಿವನ ರೂಪದಲ್ಲಿರುವ ಶುಕ್ರನ ಪೂಜೆ ಮಾಡುತ್ತಾರೆ.
ಈ ದೇವಸ್ಥಾನದ ಬಗ್ಗೆ ಪುರಾಣಗಳಲ್ಲಿರುವ ಕಥೆಯೆಂದರೆ, ಬ್ರಹ್ಮ ದೇವನು ಈ ಜಾಗದಲ್ಲಿ ಶಿವ ಮತ್ತು ಪಾರ್ವತಿಯ ಮದುವೆ ಮಾಡುವ ಕನಸು ಕಂಡಿದ್ದ. ಅಗ್ನಿಯ ರೂಪ ತಳೆದಿರುವ ಶಿವ ಇಲ್ಲಿರುವ ಕಾರಣ ಈ ದೇವಸ್ಥಾನಕ್ಕೆ ಅಗ್ನೀಶ್ವರರ್ ಎಂದೂ ಕರೆಯಲಾಗುತ್ತಿದೆ. ಬ್ರಹ್ಮ ದೇವ ಪೂಜಿಸಿದ್ದ ಬ್ರಹ್ಮ ಲಿಂಗವೂ ಈ ದೇವಸ್ಥಾನದ ಒಳಗಡೆಯಿದೆ. ಇದು ಶುಕ್ರನ ದೇವಸ್ಥಾನವಾದರೂ ಶುಕ್ರನಿಗೆಂದು ಪ್ರತ್ಯೇಕ ಗರ್ಭಗುಡಿಯಿಲ್ಲ. ಇಲ್ಲಿ ಶಿವನೇ ಶುಕ್ರನ ರೂಪದಲ್ಲಿದ್ದಾನೆನ್ನುವ ಪ್ರತೀತಿ.
ಅಗ್ನೀಶ್ವರರ್ ದೇವಸ್ಥಾನದಲ್ಲಿ ಎರಡು ಪ್ರಕಾರಗಳಿವೆ. ಕಾಲಿಕಂಬರ್ ಮತ್ತು ಮನಕಂಜರರ್ ಇತರ ಎರಡು ಪುಣ್ಯಕ್ಷೇತ್ರಗಳು. ಈ ದೇವಸ್ಥಾನದಲ್ಲಿ ಶಿವಕಾಮಿ ಮತ್ತು ನಟರಾಜನ ಕಲ್ಲಿನ ಮೂರ್ತಿಗಳಲ್ಲದೆ ವಿಜಯನಗರ ಹಾಗೂ ಚೋಳರ ಕಾಲದಲ್ಲಿ ಕೆತ್ತಲಾಗಿರುವ ಕಲ್ಲಿನ ಕೆತ್ತನೆಗಳು ಇವೆ. ನಟರಾಜ ಸಭಾ ಮುಕ್ತಿ ಮಂಟಪಕ್ಕೆ ಮತ್ತು ಶಿವ ತಾಂಡವಂ ಮುಕ್ತಿ ತಾಂಡವಂಗೆ ಪ್ರಸಿದ್ದಿಯಾಗಿದೆ.