ದೇವೂನಿಕಡಪಾವು ಅತ್ಯಂತ ಜನಪ್ರಿಯ ಹಿಂದು ಧರ್ಮಿಯರ ಧಾರ್ಮಿಕ ತಾಣವಾಗಿದೆ. ಇದಕ್ಕೆ ಇಲ್ಲಿನ ಧಾರ್ಮಿಕ ಆಚರಣೆಗಳು ಕಾರಣ. ಇದು ತಿರುಮಲ ತಿರುಪತಿ ದೇವರ ಸನ್ನಿಧಿಯಾಗಿದೆ. ಇಲ್ಲಿ ಸಂದರ್ಶಿಸಿದರೆ ಈ ಪ್ರದೇಶದ ಎಲ್ಲಾ ಧಾರ್ಮಿಕ ತಾಣ ಸಂದರ್ಶಿಸಿದ್ದು ಸಂಪನ್ನವಾಗುತ್ತದೆ ಎಂಬ ನಂಬಿಕೆ ಇದೆ.
ತಿರುಮಲಾ ಥೋಲಿ ಗಡಪಾ ದೇವೂನಿ ಕಡಪಾ ಅಂತಲೇ ದೇವೂನಿಕಡಪಾ ಕರೆಸಿಕೊಳ್ಳುತ್ತದೆ. ಇಲ್ಲಿರುವ ಜನಪ್ರಿಯ ಲಕ್ಷ್ಮಿ ವೆಂಕಟೇಶ್ವರ ದೇವಾಲಯ, ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣಗೊಂಡ ಪ್ರಮುಖ ದೇವಾಲಯವಾಗಿದೆ. ವೆಂಕಟೇಶ್ವರ ವಿಗ್ರಹವು ವಿಹಂಗಮವಾಗಿದ್ದು, ಇದನ್ನು ಗುರು ಕೃಪಾಚಾರ್ಯರೇ ಖುದ್ದು ಸ್ಥಾಪಿಸಿದ್ದಾರೆ ಎಂದು ನಂಬಲಾಗುತ್ತದೆ. ಇದರಿಂದಾಗಿ ಈ ಪ್ರದೇಶವನ್ನು ದೇವೂನಿಕಡಪಾ ಎಂದು ಕರೆಯಲಾಗುತ್ತದೆ. ಇದನ್ನು ಕೃಪಾವತಿ ಕಿಶ್ತಂನಲ್ಲಿಯೂ ಉಲ್ಲೇಖಿಸಲಾಗಿದೆ.
ಭಕ್ತಾದಿಗಳು ತಿರುಪತಿಗೆ ತೆರಳುವ ಮುನ್ನ ಇಲ್ಲಿ ಬಂದು ಇಲ್ಲಿನ ಅಣ್ಣಮ್ಮಾಚಾರ್ಯ ಹಾಗೂ ಪೋಟ್ಲೂರಿ ವೀರಬ್ರಹ್ಮೇಂದ್ರ ಸ್ವಾಮಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಾರೆ. ಇಲ್ಲಿ ಅರ್ಚನೆ ಮಾಡಿಸಲು ಹಲವರು ಬರುತ್ತಾರೆ. ಇಲ್ಲಿ ಧಾರ್ಮಿಕ ಆಚರಣೆಗಳು, ಕಾರ್ಯಕ್ರಮ ಸದಾಕಾಲ ಇದ್ದೇ ಇರುತ್ತದೆ. ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ವಾರದ ಎಲ್ಲಾ ದಿನವೂ ಭಕ್ತರು ಇರುತ್ತಾರೆ. ಆದರೆ ಶನಿವಾರ ವಿಶೇಷ ಕಾರ್ಯಕ್ರಮ ಇರುವುದರಿಂದ ಹೆಚ್ಚಿರುತ್ತಾರೆ.


Click it and Unblock the Notifications