ಜಿಂದ್ ನಿಂದ 20 ಕಿ.ಮೀ. ದಕ್ಷಿಣದಲ್ಲಿರುವ ಪೊಂಕರ್ ಖೇರಿ ಗ್ರಾಮದಲ್ಲಿ ಪುಷ್ಕರ ತೀರ್ಥವಿದೆ. ಪುರಾಣದಲ್ಲಿರುವ ಜಮದಗ್ನಿ ಮತ್ತು ರೇಣುಕಾ ದಂಪತಿಯ ಪುತ್ರನಾಗಿರುವ ಪರಶುರಾಮ ಈ ಮಂದಿರವನ್ನು ಕಟ್ಟಿದ. ಶಿವನ ಅವತಾರವಾಗಿರುವ ಪರಶುರಾಮನ ಕುಟುಂಬ ವಂಶಾವಳಿ ಬ್ರಹ್ಮ ವಂಶಸ್ಥರದ್ದಾಗಿದೆ.
ಪರಶುರಾಮ ವಿಷ್ಣು ದೇವರ ಆರನೇ ಅವತಾರ ಮತ್ತು ಅಮರತ್ವ ಹೊಂದಿದ್ದ. ಶಿವನನ್ನು ಓಲೈಸಿಕೊಳ್ಳಲು ಆತ ಸುದೀರ್ಘ ಮತ್ತು ಕಠಿಣ ತಪಸ್ಸನ್ನು ಮಾಡಿದೆ. ಪರುಶುರಾಮನ ತಪಸ್ಸಿಗೆ ಒಲಿದ ಶಿವ ಆತನಿಗೆ ಸಮರಕಲೆಗಳನ್ನು ಕಲಿಸಿ ಪ್ರತಿಭಾನ್ವಿತ ಕೊಡಲಿಯೊಂದರನ್ನು ಉಡುಗೊರೆಯಾಗಿ ನೀಡಿದ.
ತನ್ನ ತಂದೆಯನ್ನು ಕೊಂದ ಕ್ಷತ್ರೀಯ ರಾಜ ಕರ್ತವೀರ್ಯನ ವಿರುದ್ಧ ಸೇಡಿಗಾಗಿ ಆತನ 21 ಸಲ ಕ್ಷತ್ರೀಯರನ್ನು ಕೊಂದಿದ್ದ. ಆತ ಮಹಾಭಾರತದ ಕರ್ಣ ಮತ್ತು ದ್ರೋಣಾಚಾರ್ಯರಿಗೆ ಸಮರಕಲೆ ಕಲಿಸಿದ್ದ. ಆತ ಹಲವಾರು ಬ್ರಾಹ್ಮಣ ಮಂದಿರಗಳನ್ನು ನಿರ್ಮಿಸಿದ. ಸಂಪ್ರದಾಯದ ಪ್ರಕಾರ ಈ ದೇವಾಲಯದಲ್ಲಿ ಒಂದು ಪ್ರಾರ್ಥನೆ ಮಾಡಿದರೆ ಅಶ್ವಮೇಧ ಯಾಗದ ಶ್ರೇಷ್ಠತೆಯನ್ನು ಪಡೆದಂತಾಗುತ್ತದೆ. ತಮ್ಮ ಪೂರ್ವಜರಿಗೆ ಪ್ರಾರ್ಥನೆ ಮಾಡುವುದನ್ನು ಧಾರ್ಮಿಕ ಹಾಗೂ ಪವಿತ್ರ ಎಂದು ಪರಿಗಣಿಸಲಾಗಿದೆ.


Click it and Unblock the Notifications