ಜಿಂದ್ ನಿಂದ 6 ಕಿ.ಮೀ. ದೂರದಲ್ಲಿರುವ ನಿರ್ಜನ ಗ್ರಾಮದಲ್ಲಿ ಮುಂಜಾವತ ತೀರ್ಥವಿದೆ. ವಾಮನ ಪುರಾಣಗಳಲ್ಲಿರುವಂತೆ ಈ ಪವಿತ್ರ ಸ್ಥಳವು ದೇವರುಗಳ ದೇವ ಮಹಾದೇವರಿಗೆ ಸಂಬಂಧಿಸಿದ್ದಾಗಿದೆ. ಮಹಾದೇವ ದೇವರನ್ನು ಮೃತ್ಯುಂಜಯ ಅಥವಾ ಸಾವನ್ನು ಗೆದ್ದವ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ. ಇದರಿಂದಾಗಿ ಮಹಾದೇವನನ್ನು ಮಹಾಕಲಾನೆಂದು ಕರೆಯಲಾಗುತ್ತದೆ.
ಹಣೆಯಲ್ಲಿ ಮೂರನೇ ಕಣ್ಣನ್ನು ಹೊಂದಿರುವ ಮಹಾದೇವನ ಬಲದ ಕೈಯಲ್ಲಿ ಒಂದು ಭಯಾನಕ ಸಂಜ್ಞೆಯನ್ನು ಮಾಡಿ, ಎಡದ ಕೈಯಲ್ಲಿ ಢಮರು ಹಿಡಿಕೊಂಡಿದ್ದಾನೆ. ಹುಲಿ ಚರ್ಮವನ್ನು ಧರಿಸಿರುವ ಮಹಾದೇವ ಹುಲಿ ಚರ್ಮದ ಮೇಲೆ ಕುಳಿತುಕೊಳ್ಳುತ್ತಾನೆ. ಪವಿತ್ರ ನೀರು ಇರುವ ಕಮಂಡಲ ಮಹಾದೇವನ ಬಳಿಯಲ್ಲಿರುತ್ತದೆ.
ಮುಂಜಾವತ ಯಾತ್ರಾಸ್ಥಳದಲ್ಲಿ ಮಾಡುವ ಪ್ರಾರ್ಥನೆಯಿಂದ ದೇವರ ಕೃಪೆಗೊಳಗಾಗಿ ಮನಸ್ಸಿಗೆ ಶಾಂತಿ ಹಾಗೂ ಸುಖ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಮುಂಜಾವತದಲ್ಲಿ ಒಂದು ರಾತ್ರಿ ವಾಸ್ತವ್ಯವಿದ್ದರೆ ಗಣಪತಿ ದೇವರಿಗೆ ಮಾಡಲಾಗುವ ಪ್ರಾರ್ಥನೆ ಗಣಪತಾಯವನ್ನು ಸಾಧಿಸಹುದು.


Click it and Unblock the Notifications