ಋಗ್ ವೇದದ ಪ್ರಕಾರ ಇಂದ್ರ, ಸೋಮ ಮತ್ತು ಅಗ್ನಿಯ ಬಳಿಕ ಅವಳಿ ದೇವರಾದ ಅಶ್ವಿನಿಯರಿಗೆ ಹೆಚ್ಚಿನ ಪ್ರಾಮುಖ್ಯತೆ. ಅವರ ಶ್ರೇಷ್ಠತೆಗೆ ಮೂರು ಕಾರಣ ಕೂಡ ನೀಡಲಾಗಿದೆ. ಒಂದು, ಪುರಾಣ ಅವತಾರಗಳಲ್ಲಿ ಅವರು ಸತ್ಯದ ಪ್ರಬಲ ಅನುಯಾಯಿಗಳು ಮತ್ತು ಸುಳ್ಳನ್ನು ತೀವ್ರವಾಗಿ ವಿರೋಧಿಸುತ್ತಿದ್ದರು. ಎರಡನೇಯದಾಗಿ ಅವರು ಯಾವಾಗಲೂ ಕುದುರೆಯ ಮೇಲಿರುತ್ತಿದ್ದರು. ಮೂರನೇಯದಾಗಿ ಅವರು ಅತ್ಯುತ್ತಮ ವೈದ್ಯರಾಗಿದ್ದರು. ಅವರು ದೇವರ ವೈದ್ಯರಾಗಿದ್ದರು. ದೇವ-ದೇವತೆಗಳಿಗೆ ಏನಾದರೂ ಅನಾರೋಗ್ಯ ಬಂದರೆ ಅವರು ಅಶ್ವಿನಿಯರ ಹತ್ತಿರ ವೈದ್ಯಕೀಯ ಚಿಕಿತ್ಸೆಗೆ ತೆರಳುತ್ತಿದ್ದರು. ಭೂಮಿಯಲ್ಲಿ ಸಾಮಾನ್ಯ ಮುನುಷ್ಯರಿಗೆ ಗುಣಪಡಿಸಲಾರದ ಕಾಯಿಲೆಯಿದ್ದರೆ ಅವರು ಅದಕ್ಕೆ ದಯೆಪಾಲಿಸುತ್ತಾರೆ.
ಅಶ್ವಿನಿ ಕುಮಾರರ ದೇವಾಲಯವು ಜಿಂದ್ ನಲ್ಲಿದೆ. ನಗರ ಪೂರ್ವ ಭಾಗದಲ್ಲಿ 14 ಕಿ.ಮೀ. ದೂರದಲ್ಲಿ ಈ ಮಂದಿರವಿದೆ. ಈ ಪವಿತ್ರ ಸ್ಥಳದ ಬಗ್ಗೆ ಮಹಾಭಾರತ, ಪದ್ಮ ಪುರಾಣ, ನಾರದಿಯಾ ಪುರಾಣ ಮತ್ತು ವಾಮನ ಪುರಾಣಗಳಲ್ಲಿ ಉಲ್ಲೇಖವಿದೆ.
ಅಶ್ವಿನಿ ಕುಮಾರದಲ್ಲಿ ಸ್ನಾನ ಮಾಡುವುದರಿಂದ ಭಕ್ತರು ತಮ್ಮ ಆತ್ಮವನ್ನು ಶುದ್ಧೀಕರಿಸಿ ಮುಕ್ತಿಗೆ ದಾರಿ ಮಾಡಿಕೊಳ್ಳಬಹುದು ಎಂದು ಪುರಾಣಗಳಲ್ಲಿದೆ. ಪವಿತ್ರ ಸ್ಥಳದಲ್ಲಿರುವ ನೀರು ರೋಗನಿವಾರಕವಾಗಿದ್ದು, ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ. ಮಂದಿರದಲ್ಲಿರುವ ಎರಡು ದೇವರ ಮೂರ್ತಿಗಳಿಗೆ ತುಂಬಾ ಗೌರವಾದರಗಳಿಂದ ಪೂಜೆ ನಡೆಯುತ್ತದೆ.