ಕುಳಂದೈ ವೇಲಾಯುಧ ಸ್ವಾಮಿ ದೇವಾಲಯವು ಕೊಯಮತ್ತೂರು ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣವಾದ ಕುರುಂದಮಲೈನಲ್ಲಿ ನೆಲೆಸಿದೆ. ಈ ದೇವಾಲಯವು ಕೊಯಮತ್ತೂರಿನಿಂದ 24 ಕಿ.ಮೀ ಮತ್ತು ಕರಮಡೈನಿಂದ 4 ಕಿ.ಮೀ ದೂರದಲ್ಲಿ ನೆಲೆಸಿದೆ.
ಈ ದೇವಾಲಯವನ್ನು ಕುಳಂದೈ ವೇಲಾಯುಧ ಸ್ವಾಮಿಗಾಗಿ ನಿರ್ಮಿಸಲಾಗಿದೆ. ಮುರುಗನ್ ಅಥವಾ ಸುಬ್ರಹ್ಮಣ್ಯ ಸ್ವಾಮಿಯನ್ನು ವೇಲಾಯುಧ ಸ್ವಾಮಿ ಎಂಬ ಹೆಸರಿನಿಂದ ಸಹ ಪೂಜಿಸಲಾಗುತ್ತದೆ. ಮುಖ್ಯದೇವರನ್ನು ಈ ದೇವಾಲಯದ ಗರ್ಭಗುಡಿಯಲ್ಲಿ ಪಶ್ಚಿಮಾಭಿಮುಖವಾಗಿ ಸ್ಥಾಪಿಸಲಾಗಿದೆ. ಈ ದೇವಾಲಯವು ಒಂದು ದಿಬ್ಬದ ಮೇಲೆ ನೆಲೆಗೊಂಡಿದೆ. ದಿಬ್ಬದ ಬುಡದಲ್ಲಿ ಗಣಪತಿಯ ಒಂದು ಸಣ್ಣ ದೇವಾಲಯವನ್ನು ಸಹ ನಾವು ಕಾಣಬಹುದು. ಮುರುಗನ್ ಶಿವ- ಪಾರ್ವತಿಯರ ಪುತ್ರ. ಗಣಪತಿಯು ಆತನ ತಮ್ಮ.
ಕುಳಂದೈ ವೇಲಾಯುಧ ಸ್ವಾಮಿ ದೇವಾಲಯವು ಈ ಪ್ರದೇಶದ ಅತ್ಯಂತ ಸುಂದರ ದೇವಾಲಯವೆಂಬ ಕೀರ್ತಿಗೆ ಭಾಜನವಾಗಿದೆ. ಇದರ ಇತಿಹಾಸವು ಸುಮಾರು 700 ವರ್ಷಗಳಷ್ಟು ಹಿಂದಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ದಂತಕತೆಗಳ ಪ್ರಕಾರ ಶ್ರೀ ಅಗಸ್ತ್ಯ ಮಹರ್ಷಿಗಳು ಈ ದೇವಾಲಯದಲ್ಲಿ " ಮಂದಿರ ಉಪದೇಶಂ" ಅನ್ನು ಸ್ವತಃ ಸ್ವಾಮಿಯವರಿಂದ ಸ್ವೀಕರಿಸಿದರೆಂದು ನಂಬಲಾಗುತ್ತದೆ. ಹಾಗಾಗಿ ಈ ದೇವಾಲಯವು ಭಕ್ತಾಧಿಗಳ ವಲಯದಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ.