ಚಿಕ್ಕಬಳ್ಳಾಪುರದಲ್ಲಿ ವಿಷ್ಣುವಿನ ಅವತಾರವೆಂದೇ ಪ್ರತೀತಿಯಿರುವ ಅಮರನಾರಾಯಣ ದೇವಸ್ಥಾನ ಹಿಂದೂ ಸಮಾಜ ಬಾಂಧವರಿಗೆ ಪೂಜ್ಯನೀಯ ಸ್ಥಳವಾಗಿದೆ. ಈ ದೇವಸ್ಥಾನವು ತನ್ನ ವಿಶೇಷ ಕಟ್ಟಡದಿಂದ ಗಮನ ಸೆಳೆಯುತ್ತದೆ. ಇಲ್ಲಿ ನವಗ್ರಹ ಮಂಟಪ ಮತ್ತು ಸುಂದರವಾದ ಚಿತ್ರಗಳಿಂದ ಚಿತ್ರಿತವಾದ ಗೋಡೆಗಳು ಅದ್ಭುತ ವಾಸ್ತುಶೈಲಿಗಳಿಂದ ಮನಸೆಳೆಯುತ್ತವೆ. ಹೊಯ್ಸಳರ ದೊರೆ ವಿಷ್ಣುವರ್ಧನ ಈ ದೇವಸ್ಥಾನದಲ್ಲಿರುವ ಮೂರ್ತಿಯನ್ನು ಪ್ರತಿಷ್ಠಾಪಿಸಿದನೆನ್ನಲಾಗಿದೆ.