ಅಲಹಾಬಾದ್ ನಲ್ಲಿರುವ ಬಡೇ ಹನುಮಾನಜಿ ಮಂದಿರ ಹಿಂದೂಗಳ ಅನೇಕ ಜನಪ್ರಿಯ ಮಂದಿರಗಳಲ್ಲಿ ಒಂದು. ಅಲ್ಲಿಯ ಜನ ಈ ಮಂದಿರದಲ್ಲಿರುವ ಹನುಮಂತನ ಮೂರ್ತಿಗೆ ಅಗಾಧವಾದ ಶಕ್ತಿ ಇದೆ ಹಾಗು ವಿಶೇಷವಾದ ಸಾನ್ನಿಧ್ಯ ಇದೆ ಎಂದು ನಂಬುತ್ತಾರೆ.
ಒಂದು ಜನಜನಿತವಾದ ಕಥೆ ಹೀಗಿದೆ : ಒಮ್ಮೆ ಶ್ರೀಮಂತ ವ್ಯಾಪಾರಿಯೊಬ್ಬ ಹನುಮಂತನ ಪ್ರತಿಮೆಯನ್ನು ಕೆತ್ತಿಸಿ ಅದನ್ನು ತೆಗೆದುಕೊಂಡು ಉತ್ತರ ಉಪಖಂಡದೆಡೆಗೆ ಯಾತ್ರೆಗಾಗಿ ಹೊರಟ. ಮಾರ್ಗ ಮಧ್ಯದಲ್ಲಿ ಹನುಮಂತನು ಆತನ ಕನಸಿನಲ್ಲಿ ಪ್ರತ್ಯಕ್ಷವಾಗಿ ಆ ಮೂರ್ತಿಯನ್ನು ಅಲ್ಲೇ ಬಿಡುವಂತೆ ಹೇಳಿದ. ಅದರಂತೆ ಆ ವ್ಯಾಪಾರಿ ಆ ಮೂರ್ತಿಯನ್ನು ಅಲ್ಲೇ ಬಿಟ್ಟುಹೋದ. ಎಷ್ಟೋ ವರ್ಷಗಳ ನಂತರ ಬಾಲಗಿರಿ ಎಂಬಾತನು ಈ ಪ್ರತಿಮೆಯನ್ನು ತೆಗೆದುಕೊಂಡು ಈಗಿರುವ ಹನುಮಾನ್ ಮಂದಿರವನ್ನು ಕಟ್ಟಿಸಿದ. ಶ್ರೀಮಂತ ವ್ಯಾಪಾರಿ ಮೂರ್ತಿಯನ್ನು ಬಿಟ್ಟುಹೋದ ಮೇಲೆ ತನ್ನ ಎಲ್ಲಾ ಆಸೆಗಳು ಪೂರೈಸಿತು ಎಂದು ಹೇಳುತ್ತಾನೆ.
ಈ ಮಂದಿರ ಸಾಕಷ್ಟು ಭಕ್ತಾದಿಗಳನ್ನು ತನ್ನತ್ತ ಆಕರ್ಷಿಸುತ್ತಿರುವುದು ಒಂದು ಅದ್ಭುತವೇ ಸರಿ. ಭಕ್ತಾದಿಗಳೆಲ್ಲ ತಮ್ಮ ಮನೋಕಾಮನೆಗಳನ್ನು ಪೂರೈಸಿಕೊಳ್ಳಲು ಇಲ್ಲಿಗೆ ಭಕ್ತಿಯಿಂದ ಬರುತ್ತಾರೆ.


Click it and Unblock the Notifications