ಯಾಣದಲ್ಲಿರುವ ಯಾಣ ಗುಹೆಗುಳುಪ್ರಸಿದ್ಧ ಆಕರ್ಷಣೆಯಾಗಿದ್ದು ಎಲ್ಲ ಪ್ರವಾಸಿಗರು ನೋಡಲೇಬೇಕಾದಂತಹ ಮತ್ತೊಂದು ಸ್ಥಳವಾಗಿದೆ. ಕರ್ನಾಟಕದ ಸಹ್ಯಾದ್ರಿ ಬೆಟ್ಟದ ಸಾಲಿನ ಹಸಿರು ಅರಣ್ಯ ಮಧ್ಯಭಾಗದಲ್ಲಿ 3 ಮೀಟರ್ ಆಳವಿರುವ ಗುಹೆಗಳಿವೆ. ಕಪ್ಪು ಸ್ಪಟಿಕ ಸುಣ್ಣದ ಕಲ್ಲುಗಳಿಂದ ಯಾಣದ ಗುಹೆಗಳು ವಿಶೇಷವಾಗಿ ರಚನೆಗೊಂಡಿರುವ ಕಪ್ಪು ಸ್ಫಟಿಕ ಸುಣ್ಣದಕಲ್ಲುಗಳಿಂದ ನಿರ್ಮಿತಗೊಂಡಿದ್ದು ಪ್ರವಾಸಿಗರು ಬೆಟ್ಟ ಹತ್ತುವ ಮಜವನ್ನು ಅನುಭವಿಸಬಹುದಾಗಿದೆ. ಗುಹೆಗಳ ಒಳಗೆ ಪ್ರವೇಶಿಸುತ್ತಿದ್ದಂತೆ ಶಿವ ಲಿಂಗವು ಸಿಗುತ್ತದೆ, ಇದನ್ನು ಸ್ಥಳೀಯರು ಗಂಗೋದ್ಭವ ಎಂದು ಕರೆಯುತ್ತಾರೆ.
ಹಳೆಯ ದೇವಸ್ಥಾನಗಳು, ಬಂಡೆಗಲ್ಲುಗಳ ರಚನೆ, ಬೆಟ್ಟಗಳು ಹಾಗು ಜಲಪಾತಗಳಿಂದಾಗಿ ಈ ಸ್ಥಳವು ಪ್ರವಾಸಿಗರಲ್ಲಿ ಹೆಸರಾಗಿದೆ. ಅದಕ್ಕಿಂತ ಹೆಚ್ಚಾಗಿ ದುರ್ಗಾ ದೇವಿಯ ಪ್ರತಿರೂಪವಾದ ಚಂಡಿಕಾ ಕಂಚಿನ ವಿಗ್ರಹವನ್ನು ಪ್ರವಾಸಿಗರು ನೋಡಬಹುದಾಗಿದೆ. ಬಂಡೆಗಳಿಂದ ಸಾಗುವ ನೀರು ಸಣ್ಣ ನದಿಯನ್ನು ಸೃಷ್ಟಿಸುತ್ತದೆ, ಆ ಹೊಳೆಯನ್ನು ಚಂಡಿ ಹೊಳೆ ಎನ್ನುತಾರೆ. ಅದು ಉಪ್ಪಿನಪಟ್ಟಣದಲ್ಲಿರುವ ಅಘನಾಶಿನಿ ನದಿಯನ್ನು ಸೇರುತ್ತದೆ. ಅಲ್ಲಿ ತಂಗಲು ಇಚ್ಛಿಸುವ ಪ್ರವಾಸಿಗರಿಗೆ ಶಿಬಿರ ಹೂಡಲು ಉಪಕರಣಗಳನ್ನು ನೀಡಲಾಗುತ್ತದೆ.


Click it and Unblock the Notifications